Posts

Showing posts from April, 2022

Hari Narayana song lyrics in Kannada

Image
Hari Narayana Lyrics | Meaning & Transliteration in English A beautiful devotional hymn dedicated to Lord Vishnu In this post, we explore the devotional composition "ಹರಿ ನಾರಾಯಣ" (Hari Narayana), a spiritual hymn that praises the divine name of Lord Vishnu. It emphasizes the power of chanting the Lord’s name to overcome suffering and attain salvation. Below you'll find the Kannada lyrics and English transliteration Lyrics in Kannada ಹರಿ ನಾರಾಯಣ ಹರಿ ನಾರಾಯಣ ಹರಿ ನಾರಾಯಣ ಎನು ಮನವೆ ಹರಿ ನಾರಾಯಣ ದುರಿತ ನಿವಾರಣ ಹರಿ ನಾರಾಯಣ ಎನು ಮನವೆ ನಾರಾಯಣನೆಂಬ ನಾಮದ ಬೀಜವ ನಾರದ ಬಿತ್ತಿದ ಧರೆಯೊಳಗೆ ತರಳ ಧೃವನಿಂದ ಅಂಕುರಿಸಿತು ಅದು ವರ ಪ್ರಹ್ಲಾದನಿಂದ ಮೊಳಕೆ ಆಯ್ತು ಧರಣೀಶ ರುಕುಮಾಂಗದನಿಂದ ಚಿಗುರಿತು ಕುರುಪಿತಾಮಹನಿಂದ ಹೂವಾಯ್ತು ||೧|| ವಿಜಯನ ಸತಿಯದಿಂದ ಕಾಯಾಯ್ತು ಅದು ಗಜೇಂದ್ರನಿಂದ ದೊರೋಹಣ್ಣಾಯ್ತು ನಿಜ ಶುಕಾಮುನಿಯಿಂದ ಪರಿಪಕ್ವವಾಯಿತು ಅಜಮಿಳ ತಾನುಂಡು ರಸಸವಿದ ||೨|| ಕಾಮಿತ ಫಲವೀವ ನಾಮವೊಂದಿರಲಾಗಿ ಹೋಮ ನೇಮ ಜಪ ತಪವ್ಯಕೆ ಸ್ವಾಮಿ ಶ್ರೀ ಪುರಂದರ ವಿಠಲನ ನಾಮವ ಪ್ರೇಮದಿಂದಲಿ ನೆನೆಮನವೆ ||೩|| English...

Shri Guru Charitre - Chapter 53

Image
  ಅಧ್ಯಾಯ ೫೩ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ಶ್ರೀ ಗುರುಚರಿತ್ರೆಯನ್ನು ಶ್ರವಣ ಮಾಡಿ, ನಾಮಧಾರಕನ ಮನವು ಬ್ರಹ್ಮಾನಂದದಲ್ಲಿ ನಿಮಗ್ನವಾಯಿತು. ಅವನ ಮೈಮೇಲೆ ರೋಮಾಂಚನಗಳೆದ್ದವು, ಕಂಠವು ಭಕ್ತಿಭಾವದಿಂದ ಗದ್ಗುದಿತವಾಯಿತು. ಅಂಗಾಂಗಗಳು ನಡುಗತೊಡಗಿದವು. ಕಣ್ಣುಗಳ ಹೊಳಪು ಹೆಚ್ಚಾಗಿ ಅವುಗಳಿಂದ ಧಾರಾಕಾರವಾಗಿ ಆನಂದಾಶ್ಯಗಳು ಉದುರ ತೊಡಗಿದವು. ಸಮಾಧಿ ಸುಖಕ್ಕೀಡಾದ ಅವನು ಮೂಕನಂತಾದನು. ದೇಹವು ಅಲುಗಾಡದಾಯಿತು. ಅವನ ಮುಖದಲ್ಲಿ ಸಾತ್ವಿಕ ಅಷ್ಟಭಾವಗಳು ಮೂಡಿ ನಿಂತವು ! ನಾಮಧಾರಕನಿಗುಂಟಾದ ಈ ಸ್ಥಿತಿಯನ್ನು ನೋಡಿ, ಸಿದ್ಧಮುನಿಯು ಆನ೦ದ ಹೊ೦ದಿದನು. ಈತನಿಗೆ ಈಗ ಸಮಾಧಿ ಸುಖಲಭಿಸಿತು. ಇವನನ್ನು ಇದೇ ಸ್ಥಿತಿಯಲ್ಲಿ ಉಳಿಯಗೊಟ್ಟರೆ, ಲೋಕೋಪಕಾರದ ಕರ್ತವ್ಯಕ್ಕೆ ವ್ಯತ್ಯಯ ಬರುವದು. ಇವನನ್ನು ಶುದ್ದಿಯ ಮೇಲೆ ತರುವದೇ ಒಳಿತು! ಎಂದು ಯೋಚಿಸಿ, ಸಿದ್ಧಮುನಿಯು, “ಎಲೈ ಶಿಷ್ಯತ್ತಮನಾದ ನಾಮಧಾರಕನೇ !! ಬೇಗ ಎಚ್ಚರಾಗು ! ಎಂದು ಆತನ ಮೈಮೇಲೆ ಕೈಯ್ಯಾಡಿಸಿ, ಪ್ರೇಮ ಭಾವದಿಂದ ಅಪ್ಪಿಕೊಂಡನು. ಮತ್ತು ಆತನನ್ನು ಕುರಿತು, ನಾಮಧಾರಕಾ ನೀನಿನ್ನು ಭವಸಾಗರವನ್ನು ದಾಟಿದಂತಾಯಿತು. ನೀನು ಹೀಗೆ ಸಮಾಧಿ ಸ್ಥಿತಿಯಲ್ಲಿ ಕುಳಿತರೆ, ದಿವ್ಯವಾದ ಜ್ಞಾನವು ನಿನ್ನ ಹೃದಯದಲ್ಲಿಯೇ ಇದ್ದು ಉಳಿದುಬಿಡುತ್ತದೆ. ಅದರಿಂದ ಲೋಕೋದ್ಧಾರವಾಗಲಾರದು ! ನೀನಿನ್ನು ಹೀಗೆ ಕೂಡ್ರಬೇಡಾ ! ಶಾಸ್ತ್ರಾಧಾರವನ್ನನುಸರಿಸಿ ನಿನ್ನ ಬಾಹ್ಯ ದೇಹದ ಸ್ಥಿತಿ ಇರಲಿ ! ನೀನು ಗುರು ಚರಿತ್ರ...

Om mangalam Omkar mangalam lyrics in Kannada

Image
ಓಂ ಮಂಗಳಂ ಸ್ತುತಿ ಕನ್ನಡ ಓಂ ಮಂಗಳಂ ಓಂಕಾರ ಮಂಗಳಂ ಓಂ ನಮಃ ಶಿವಾಯ ಮಂಗಳಂ ಶಿವಾಯ ಮಂಗಳಂ ನ ಮಂಗಳಂ ನಕಾರ ಮಂಗಳಂ ನಾದಬಿಂದು ಕಳಾತೀತ ಗುರುವೆ ಮಂಗಳಂ ಸದ್ಗುರವೆ ಮಂಗಳಂ ಮ ಮಂಗಳಂ ಮಕಾರ ಮಂಗಳಂ ಮಹಾದೇವ ತಾನಾಗಿರುವ ಗುರುವೆ ಮಂಗಳಂ ಸದ್ಗುರುವೆ ಮಂಗಳಂ ಶಿ ಮಂಗಳಂ ಶಿಕಾರ ಮಂಗಳಂ ಸಿದ್ಧಬುದ್ಧ ರೂಪನಾದ ಗುರುವೆ ಮಂಗಳಂ ಸದ್ಗುರುವೆ ಮಂಗಳಂ ವಾ ಮಂಗಳಂ ವಕಾರ ಮಂಗಳಂ ವಾದಭೇದದೂರನಾದ ಗುರುವೆ ಮಂಗಳಂ ಸದ್ಗುರುವೆ ಮಂಗಳಂ ಯ ಮಂಗಳಂ ಯಕಾರ ಮಂಗಳಂ ಎಲ್ಲಾ ವಸ್ತು ತಾನಾಗಿರುವ ಗುರುವೆ ಮಂಗಳಂ ಎಲ್ಲಾ ರೂಪು ತಾನಾಗಿರುವ ಗುರುವೆ ಮಂಗಳಂ। ಸರ್ವನಾಮ ರೂಪನಾದ ಗುರುವೆ ಮಂಗಳಂ। ಸದ್ಗುರುವೆ ಮಂಗಳಂ॥ Transliteration Om Maṅgaḷam Ōṅkāra Maṅgaḷam Om Namaḥ Śivāya Maṅgaḷam Śivāya Maṅgaḷam Na Maṅgaḷam Nakāra Maṅgaḷam Nādabindu Kalātīta Guruve Maṅgaḷam Sadguruve Maṅgaḷam Ma Maṅgaḷam Makāra Maṅgaḷam Mahādeva Tānāgiruva Guruve Maṅgaḷam Sadguruve Maṅgaḷam Śi Maṅgaḷam Śikāra Maṅgaḷam Siddhabuddha Rūpanāda Guruve Maṅgaḷam Sadguruve Maṅgaḷam Vā Maṅgaḷam Vakāra Maṅgaḷam Vāda...

Shri Guru Charitre - Chapter 52

Image
  ಅಧ್ಯಾಯ ೫೨ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕನೇ ! ಶ್ರೀ ಗುರುಗಳು ಶ್ರೀಶೈಲಕ್ಕೆ ಹೊರಡುವಾಗ ಅಲ್ಲಿಯ ಭಕ್ತ ಜನರು, ಬಹಳೇ ಕಳವಳಕ್ಕೀಡಾಗಿದ್ದರು. ತಮ್ಮನ್ನು ಪರದೇಶಿಗಳನ್ನಾಗಿ ಮಾಡಿ ಹೋಗಬಾರದೆಂದು ಅವರು ಗುರುಗಳಿಗೆ ಪರಿಪರಿಯಿಂದ ಪ್ರಾರ್ಥಿಸಿದ್ದರು. ಗುರುಗಳು ಅವರೆಲ್ಲರಿಗೂ ಲೋಕದ ಕಣ್ಣಿಗೆ ನಾವು ಶ್ರೀಶೈಲ ಯಾತ್ರೆಗೆ ಹೋಗುತ್ತಿರುವಂತೆ ಕ೦ಡರೂ, ಈ ಗಾಣಗಾಪುರದಲ್ಲಿ ನಾವು ಶಾಶ್ವತವಾಗಿ ನೆಲೆಗೊಂಡಿರುತ್ತೇವೆಂದು ನುಡಿದು ಅವರನ್ನೆಲ್ಲ ಸಮಾಧಾನಗೊಳಿಸಿದ್ದ ವಿಷಯವನ್ನಂತೂ ನಿನಗೆ ಈ ಮೊದಲೇ ತಿಳಿಸಲಾಗಿದೆ. ಗುರುಗಳಿದ್ದಾಗ ಗಾಣಗಾಪುರವು ವೈಕುಂಠದಂತೆ ಶೋಭಿಸುತ್ತಿತ್ತು. ಈಗ ಅದು ತಾಯಿ ಇಲ್ಲದ ಮಗುವಾಗಿ, ದೇವರಿಲ್ಲದ ಗುಡಿಯಾಗಿ, ಗಂಡನಿಲ್ಲದ ನಾರಿಯಂತೆ ಕಳಾಹೀನವನಿಸುತ್ತಿತ್ತು, ಶ್ರೀಶೈಲ ತಲುಪಿದ ದಿವಸ ಗುರುಗಳು, ಪಾತಾಳ ಗಂಗೆಯಲ್ಲಿ ಸಾಗಿದರು. ನಂತರ ಅವರೂ ಅದೃಶ್ಯರಾದ ವಿಷಯವನ್ನೂ ನಿನಗೆ ಈ ಮೊದಲೇ ತಿಳಿಸಲಾಗಿದೆ. ಎಂದು ಸಿದ್ಧಮುನಿಯು ನಾಮಧಾರಕನಿಗೆ ಮುಖ್ಯ ವಿಷಯಗಳನ್ನು ಮತ್ತೊಮ್ಮೆ ನೆನಪಿಸಿದರೆಂಬಲ್ಲಿಗೆ ಸಾರರೂಪ ಶ್ರೀಗುರು ಚರಿತ್ರೆಯ 52ನೆಯ ಅಧ್ಯಾಯ ಮುಗಿಯಿತು.

Shri Guru Charitre - Chapter 51

Image
  ಅಧ್ಯಾಯ ೫೧ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕನೇ ! ನಂತರ ಒಂದು ದಿವಸ ಸಂಗಮದಲ್ಲಿ ಗುರುಗಳು ತಮ್ಮ ಶಿಷ್ಯ ಬಳಗವನ್ನೆಲ್ಲ ಕರೆದು, “ಶಿಷ್ಯರೇ ! ಈಗ ನಮ್ಮ ಕೀರ್ತಿಯು ಎಲ್ಲ ಕಡೆಗೂ ಹಬ್ಬಿ ಹೋಗಿದೆ, ಇನ್ನು ನಮಗೆ ಭಕ್ತರ ಉಪದ್ರವವು ಹೆಚ್ಚಾಗುವ ಸಂಭವವಿದೆ, ರಾಜ್ಯದಲ್ಲಿ ಯವನ ಆಳಿಕೆಯು ಹೆಚ್ಚಾಗಿದೆ. ಅವರೆಲ್ಲಾ ನಾನಾ ತರದ ಕಾಮನೆಗಳನ್ನು ಹೊತ್ತು ಕೊಂಡು ಬಂದು, ಸುಮ್ಮನೇ ನಮಗೆ ತೊಂದರೆ ಕೊಡುವರು. ಅದಕ್ಕಾಗಿ ನಾವಿನ್ನು ಲೌಕಿಕಾರ್ಥವಾಗಿ ಶ್ರೀಶೈಲಕ್ಕೆ ಹೊರಟು, ಅಲ್ಲಿಯೇ ಗುಪ್ತರಾಗು ವೆವು. ನಾವು ನಿಮಿತ್ಯ ಮಾತ್ರಕ್ಕೆ ಇಲ್ಲಿಂದ ಹೊರಟು ಹೋದರೂ ಸಹಿತ ಇಲ್ಲಿಯ ನಮ್ಮ ಪಾದುಕೆ ಹಾಗೂ ಅಶ್ವತ್ಥ ವೃಕ್ಷಗಳಲ್ಲಿ ಸದಾ ನಮ್ಮ ವಾಸ್ತವ್ಯವಿರುವದು. ಗಾಯನ ರೂಪದಿಂದ ನಮ್ಮನ್ನು ಸ್ತುತಿಸುವವರಿಗೆ, ಅನನ್ಯ ಭಕ್ತಿಯಿಂದ ಆರಾಧಿಸುವವರಿಗೆ, ನಾವು ಸ್ವಪ್ನ ಮುಖಾಂತರ ದರ್ಶನ ಕೊಟ್ಟು, ಅವರ ಕಷ್ಟ ನಿವಾರಿಸುತ್ತೇವೆ. ಆ ಬಗ್ಗೆ ನೀವಾರೂ ಸಂಶಯ ತಳೆಯಕೂಡದೂ !'' ಎಂದು ಹೇಳಿ, ಅಭಯ ಹಸ್ತ ತೋರಿ, ಒಮ್ಮಿಂದೊಮ್ಮಿಲೇ ಅದೃಶ್ಯರಾದರು. ಶಿಷ್ಯರೆಲ್ಲರೂ ವಿವಂಚನೆಗೀಡಾದರು. ಅವರು ಚಿಂತಾ ಕುಲರಾಗಿ ಮಠಕ್ಕೆ ಬಂದರು. ಆದರೆ ಮಠದಲ್ಲಿ ನಿತ್ಯ ಕೂಡುವ ಸ್ಥಳದಲ್ಲಿ ಗುರುಗಳು ಕುಳಿತುಕೊಂಡದ್ದು ಕಾಣಿಸಿತು. ಮತ್ತೆ ಸ್ವಲ್ಪ ವೇಳೆಯಲ್ಲಿ ಅವರು ಅಂತರ್ಧಾನರಾದರು. ಜನರಿಗೆ ಬಹು ಆಶ್ಚದ್ಯವೆನಿಸಿತು, 'ತಾವು ಇನ್ನು ಮುಂದೆಯೂ ಮಠದಲ್ಲಿ ಇದೇ ರೀತಿಯಾಗಿ ಗುಪ್ತರ...

Shri Guru Charitre - Chapter 50

Image
  ಅಧ್ಯಾಯ ೫೦ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕಾ ! ಹಿಂದೆ ಶ್ರೀಪಾದ ಶ್ರೀವಲ್ಲಭಯತಿಗಳು ರಜಕನಿಗೆ ರಾಜನಾಗುವಂತೆ ವರವನ್ನು ದಯಪಾಲಿಸಿದ್ದರಲ್ಲವೇ ? ಆತನು ವೈದುರಾ (ಬೀದರ) ನಗರದಲ್ಲಿ ಮೇಂಛ ರಾಜಕುಲದಲ್ಲಿ ಜನಿಸಿ ಆನಂದದಿಂದ ರಾಜ್ಯವಾಳಿಕೊಂಡಿದ್ದನು. ಪೂರ್ವ ಜನ್ಮದ ಸಂಸ್ಕಾರ ಫಲದಿಂದಾಗಿ, ಆತನು ಬ್ರಾಹ್ಮಣರಲ್ಲಿ ಭಕ್ತಿಯುಳ್ಳವನಾಗಿದ್ದನು. ಅದನ್ನು ಕಂಡ ಕೆಲವು ಜನ ಮುಸಲ್ಮಾನ ಖಾಜೀಗಳು, ಆತನನ್ನು ಕಂಡು, ಬಾದಶಹರೇ ! ನೀವು ಮೂರ್ತಿಪೂಜಕರಾದ ಹಿಂದೂ ಬ್ರಾಹ್ಮಣರನ್ನು ಗೌರವಿಸುತ್ತೀರಿ ಇದು ನಮ್ಮ ಧರ್ಮಕ್ಕೆ ಅಪಚಾರಮಾಡಿದ೦ತಾಗುವದಿಲ್ಲವೇ ?'' ಎಂದು ಕೇಳುತ್ತಿದ್ದರು. ಅದಕ್ಕೆ ರಾಜನು, ಅಲಾಹನು ವಿಶ್ವವ್ಯಾಪಿಯಾಗಿದ್ದಾನೆ, ಇದನ್ನು ನಮ್ಮ ಮುಸಲ್ಮಾನ ಧರ್ಮವೂ ಒಪ್ಪಿಕೊಳ್ಳುತ್ತದೆ. ಅದರಂತೆ ಹಿಂದೂಗಳ ಸಹಿತ ಭಗವ೦ತನು ವಿಶ್ವವ್ಯಾಪಿಯಾಗಿರುವನೆಂದು ಸ್ತುತಿಸುತ್ತಾರೆ. ವಿಶ್ವವ್ಯಾಪಿಯಾದ ಪರಮಾತ್ಮನನ್ನು ಅವರು ಮೂರ್ತಿರೂಪದಲ್ಲಿ ಕಲ್ಪಿಸಿಕೊಂಡು ಆರಾಧಿಸಿದರೆ ತಪ್ಪೇನಿದೆ ? ಅದು ಅಂತಃಕರಣ ಶುದ್ಧಿಗಾಗಿ ಅವರು ಮಾಡಿಕೊಂಡ ಒಂದು ಸಾಧನವಾಗಿದೆ ಮಾನವರು ಯಾವ ಧರ್ಮದಲ್ಲಿ ಜನಿಸಿದ್ದರೂ ಅವರು ಸಾಧಿಸಬೇಕಾದ ಒಂದೇ ಒಂದು ಗುರಿಯೆಂದರೆ, ಆತ್ಮ ಸಾಕ್ಷಾತ್ಕಾರ ! ಅದನ್ನು ಮರೆತು ಮತಾಂಧತೆಯಿಂದ ಆ ಜಾತಿ, ಈ ಜಾತಿ, ಎಂದು ವಾದಮಾಡುವ ಮೊಂಡ ಪಂಡಿತರ ಮಾತುಗಳಿಗೆ ನಾನು ಕಿವಿಗೊಡಲಾರೆ !'' ಎಂದು ನಿಷ್ಟುರನಾಗಿ ನುಡಿದು ಅವರ ಬಾಯಿ ಮು...

Baagu Baagale manave lyrics in Kannada

Image
ಬಾಗು ಬಾಗಲೇ ಮನವೇ ಭಜನೆಯ ಬಗ್ಗೆ ಈ ಭಜನೆ "ಬಾಗು ಬಾಗಲೇ ಮನವೇು" ಶ್ರೀ ಶಿವನಿಗೆ ಅರ್ಪಿಸಿದ ಮನಮೋಹಕ ಭಕ್ತಿ ಗೀತೆ. ಜೀವನದ ಬಯಕೆ, ಆಸೆ, ಮತ್ತು ದೇವರ ನ್ಯಾಯವನ್ನು ಅರಿತಾಗ, ಶಾಂತಿ ಮತ್ತು ಆನಂದವು ಮನಸಿಗೆ ಲಭಿಸುತ್ತದೆ. ಭಜನೆಯ ಮೂಲಕ ಶಿವನ ಪಾದಸ್ಪರ್ಶ ಅನುಭವಿಸಲು ಸಾಧ್ಯವಾಗುತ್ತದೆ. YouTube ವಿಡಿಯೋ ಕನ್ನಡ ಬಾಗು ಬಾಗಲೇ ಮನವೇ ಬಾಗು ಶಿವನಡಿಗೆ ಶಿವ ಪಾದ ಸೇರಲು ಸಾಗು ಸಾಗು ಸಾಗು ಬರುತ್ತಿಹುದು ಬಲು ಅಲ್ಪ ಶತಕೋಟಿ ಬಯಕೆಗಳು ನಿಮಿಷ ನಿಮಿಷಕ್ಕೂ ಹುಟ್ಟಿ ಕಾಡುತಿದೆ ಹಗಲಿರುಳು ಇಹವಿಲ್ಲ ಪರವಿಲ್ಲ ಬಾಳ ಗುರಿ ಬರಿ ಉರುಳು ಬಯಕೆಗಳ ಬೆನ್ನೇರಿ ಬಾಳು ಸೆರೆಯಾಗುತಿದೆ ಆನಂದ ಮದಮೋಹ ಸುಖ ಶಾಂತಿ ನೆಲೆಯದಲಿ ಅತಿ ಆಸೆ ಬಿಡುವವನು ವಿಧಿಯನು ಜಯಸುವನು ಅತೀ ಆಸೆ ವಿಧಿ ಮಾಯೇ ಮರೆಯಲ್ಲಿ ಶಿವನಿಹನು ಸಿರಿಗೆ ಮರುಳದವನಿಗೆ ಶಿವನು ತಾ ಕಾಣಿಸನು ಈ ಲೋಕ ಸೆರೆಮನೆಯು ನಾವೆಲ್ಲರೂ ಕೈದಿ ಶಿವನೇ ನ್ಯಾಯಾಧೀಶ ಇದು ಸೃಷ್ಟಿ ನಿಯಮ ಜನರು ಮಾಡಿದ ಪಾಪ ಪುಣ್ಯಗಳ ಫಲದಂತೆ ನೀಡುವನು ನ್ಯಾಯವನು ಶ್ರೀ ಮಂಜುನಾಥ Transliteration Bāgu bāgalē manavē bāgu Śivanadige Śiva pāda sērali sāgu sāgu sāgu Barutihudu balu alpa Śatakōṭ...

Shri Guru Charitre - Chapter 49

Image
  ಅಧ್ಯಾಯ ೪೯ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕನೇ ! ಮುಂದೆ ಕೆಲವು ದಿನಗಳು ಕಳೆಯುವಷ್ಟರಲ್ಲಿಯೇ ಗುರುಗಳ ಪೂರ್ವಾಶ್ರಮದ ತಂಗಿಯಾದ ರತ್ನಾಯಿಯು ಕುಷ್ಠರೋಗ ಪೀಡಿತಳಾಗಿ ಗುರುದರ್ಶನಕ್ಕೆ ಬಂದಳು. ತನ್ನ ಮೇಲೆ ಕರುಣೆದೋರಬೇಕೆಂದು ಪರಿಪರಿಯಿಂದ ಪ್ರಾರ್ಥಿಸುತ್ತ ಅವರ ಅಡಿದಾವರೆಗಳೆದುರು ಹೊರಳಾಡತೊಡಗಿದಳು. ಗುರುಗಳು ರತ್ನಾಯಿಯನ್ನು ಕುರಿತು, “ತಂಗೀ ! ನೀನು ಬಹಳ ಪಾಪವನ್ನು ಮಾಡಿರುವಿ ! ಅದರ ಫಲವನ್ನು ನೀನು ಮುಂದಿನ ಜನ್ಮದಲ್ಲಿ ಸಹಿತ, ಕುಷ್ಠರೋಗಿಯಾಗಿಯೇ ಅನುಭವಿಸಬೇಕಾಗುವದು !” ನಾನು ಇಷ್ಟು ದಿನಗಳವರೆಗೆ ಬಳಲಿ, ನಿನ್ನ ಚರಣ ಕಮಲಗಳನ್ನು ಕಂಡಿರುವೆ; ನಿನ್ನ ಚರಣದರ್ಶನವಾದ ಮೇಲೆಯೂ ನನ್ನ ಪಾಪ ಉಳಿಯುವದೇ ?'' ಎಂದು ಪ್ರಶ್ನೆ ಮಾಡಿದಳು. ಗುರುಗಳು ನಮ್ಮ ದರ್ಶನವಾದ ಮೇಲೆ ನಿನ್ನ ಪಾಪಗಳುಳಿಯಲಾರವೆಂಬ ನಿಶ್ಚಿತ ಭಾವನೆ ನಿನಗಿದ್ದರೆ, ಇದೇ ಜನ್ಮದಲ್ಲಿಯೇ ನೀನು ಮುಕ್ತಳಾಗುವಿ ! ನೀನು “ಪಾಪ ವಿನಾಶಿನಿ'' ತೀರ್ಥದಲ್ಲಿ ಸ್ನಾನಮಾಡು ! ನಿನ್ನ ರೋಗ ನಿವಾರಣೆಯಾಗುವದು !'' ಎಂದು ಹೇಳಿದರು. ರತ್ನಾಯಿಯು ಗುರ್ವಾಜ್ಞೆಯಂತೆ ತೀರ್ಥಸ್ನಾನ ಮಾಡಿ ರೋಗದಿಂದ ವಿಮುಕ್ತಿ ಪಡೆದಳು. ಮುಂದೆ ಅವಳು ಮಠದಲ್ಲಿಯೇ ಕೈಲಾದ ಸೇವೆ ಮಾಡುತ್ತ ಉಳಿದು ಕೊಂಡಳು. ಗುರುಗಳು ಶಿಷ್ಯರಿಗೆ ಗಾಣಗಾಪುರದ ಸ್ಥಾನ ಮಹಾತ್ಮೆಯನ್ನು ವಿವರಿಸಿ ಹೇಳಿದರು. 'ಭೀಮಾ- ಅಮರಜಾ ಸ೦ಗಮವು, ಗಂಗಾ-ಯಮುನೆಗಳ ಸಂಗಮವೆಂದೂ, ಈ ಸ್ಥಳವೇ ಶ್ರೀ ಕಾಶಿಯೆ...

Shri Guru Charitre - Chapter 48

Image
    ಅಧ್ಯಾಯ ೪೮ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕಾ ! ಗುರುಗಳ ಇನ್ನೊಂದು ಲೀಲೆಯನ್ನು ಕೇಳು ! ಗುರುಗಳು ನಿತ್ಯದಲ್ಲಿ ಗಾಣಗಾಪುರದಿಂದ ಸ೦ಗಮಕ್ಕೆ ಅನುಷ್ಠಾನಕ್ಕಾಗಿ ಹೋಗಿ ಬರುತ್ತಿದ್ದರು. ದಾರಿಯ ಬದಿಗಿದ್ದ ಹೊಲದೊಳಗಿನ ರೈತನೊಬ್ಬನು, ಗುರುಗಳು ಹೋಗುವಾಗೊಮ್ಮೆ ಬರುವಾಗೊಮ್ಮೆ ತನ್ನ ಹೊಲದಿಂದ ಓಡಿ ಬಂದು, ಬಹುಭಕ್ತಿಯಿಂದ ಸಾಷ್ಟಾಂಗ ನಮಸ್ಕಾರ ಮಾಡಿ ಹೋಗುತ್ತಿದ್ದನು, ಹೀಗೆಯೇ ಕೆಲದಿನ ಕಳೆಯಲು, ಒಂದು ದಿನ ಗುರುಗಳು, “ಅಪ್ಪಾ ! ದಿನ ನಿತ್ಯದಲ್ಲೂ ಯಾಕೆ ಹೀಗೆ ಕಷ್ಟ ಪಟ್ಟು ಓಡಿ ಬಂದು ನಮಸ್ಕಾರ ಮಾಡುವಿ ? ನಿನ್ನಿಚ್ಛೆ ಏನಿದೆ ?” ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಆ ಒಕ್ಕಲಿಗನು, “ಗುರುಗಳೇ ! ನನ್ನ ಹೊಲದಲ್ಲಿ ಜೋಳ ಬಿತ್ತಿರುವೆ. ತಮ್ಮ ಅನುಗ್ರಹದಿಂದಲೇ ಆ ಪೈರು ಚೆನ್ನಾಗಿ ಬೆಳೆದು, ಈಗ ಬೆಳಸಿಗಾಳಿಗೆ ಬಂದಿದೆ, ದಯವಿಟ್ಟು ತಾವು ನಾಲ್ಕು ಹೆಜ್ಜೆ ನಡೆದು ಬಂದು ಆ ಪೈರಿನ ಮೇಲೆ ತಮ್ಮ ಅಮೃತ ದೃಷ್ಟಿ ಹಾಯಿಸಿರಿ ! ಅಂದರೆ ನನಗೆ ಇಮ್ಮಡಿ ಕಾಳಿನ ಲಾಭವಾಗುತ್ತದೆ !'' ಎಂದು ಪ್ರಾರ್ಥಿಸಿಕೊಂಡನು. ಗುರುಗಳು ಆತನ ಪ್ರಾರ್ಥನೆಯಂತೆ ಅವನ ಹೊಲದವರೆಗೆ ಹೋಗಿ ಪೈರನ್ನು ನೋಡಿದರು. ಜೋಳದ ಬೆಳೆ ತುಂಬಾ ಚೆನ್ನಾಗಿ ಬೆಳೆದು, ಹಾಲುಗಳಾಗಿತ್ತು, ಗುರುಗಳು ಆ ರೈತನನ್ನು ಕುರಿತು, ಭಕ್ತಾ! ನೀನು ನಾವು ಹೇಳಿದಂತೆ ನಿಷ್ಠೆಯಿಂದ ಆಚರಿಸುವದಾದರೆ, ನೀನು ಪ್ರತಿವರ್ಷ ಪಡೆಯುವದಕ್ಕಿಂತ ಹತ್ತುಪಟ್ಟು ಹೆಚ್ಚಿನಕಾಳು ಒಕ್ಕಬಹುದು, ಆದರ...

Hey maruthi rama nama priya lyrics in Kannada

Image
ಹೇ ಮಾರುತಿ ರಾಮ ನಾಮ ಪ್ರಿಯ ಹೇ ಮಾರುತಿ ರಾಮ ನಾಮ ಪ್ರಿಯ ಹೇ ಮಾರುತಿ ರಾಮ ನಾಮ ಪ್ರಿಯ || He Māruti Rāma Nāma Priya He Māruti Rāma Nāma Priya || O Hanuman! You are dear to the name of Lord Rama. Chanting Rama’s name is your true delight. ಒಂದು ನಿಮಿಷದೊಳಗೆ ಸಂಜೀವಾನ ತಂದೆ ತಂದೆ ಲಕ್ಷ್ಮಣನ ಆನಂದದಿಂದ ಎಬ್ಬಿಸಿದೆ || Ondu nimiṣa doḷage Sanjīvāna tande Tande Lakṣmaṇa ānanda dinda ebbiside || You brought Sanjeevani within a minute, Raising Lakshmana with immense joy. ಅಣರು ಪುತರಿಸಿ ಮನೆ ಮನೆ ಧರಿಸಿ ವನಿತೆ ಜಾನಕಿಗೆ ಘನರು ಪಾತುರಿಗೆ || Aṇaru putarisi mane mane dharisi Vanite Jānaki ge ghanaru Pāturige || You rescued sons and protected every home, Serving Janaki and supporting the valiant. ಪಾತಾಳ ಲಂಕೆಲ್ಲಿ ಠಾಣರಿಯಪೋಕು ಸೀತಾರಾಮನ ಅರಸಿ ಕ್ಯಾತಿ ಪಡೆದ ಶೂರ || Pātāḷa Laṅkelli Ṭhāṇariya pōku Sītārāma arasi kyāti paḍeda śūra || You boldly went into the depth...

Shri Guru Charitre - Chapter 47

Image
    ಅಧ್ಯಾಯ ೪೭ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕನೇ ! ಇನ್ನೊಂದು ಗುರುಲೀಲೆಯ ಪ್ರಸಂಗವನ್ನು ಹೇಳುವೆ ಆಲಿಸು ! ಗುರುಗಳು ಗಾಣಗಾಪುರದಲ್ಲಿದ್ದಾಗ, ಒಮ್ಮೆ ದೀಪಾವಳಿಯ ಹಬ್ಬ ಬಂದಿತ್ತು ಆಗ ಬೇರೆ ಬೇರೆ ಏಳು ಊರುಗಳಿಂದ ಏಳು ಜನಸದ್ಭಕ್ತರು ದೀಪಾವಳಿಗೆ ತಮ್ಮಲ್ಲಿಗೆ ಬರಲು ಗುರುಗಳಿಗೆ ಆಮಂತ್ರಣ ಕೊಡಲು ಬಂದರು. ಆಗ ಗುರುಗಳು ನೀವು ಏಳೂ ಜನರು ನಮ್ಮಲ್ಲಿಗೆ ಬರಬೇಕೆಂದು ಆಮಂತ್ರಣ ಕೊಟ್ಟರೆ, ಒಂದೇ ದೇಹ ಹೊಂದಿರುವ ನಾವು ಬರುವದಾದರೂ ಹೇಗೆ ? ನಾವು ನಿಮ್ಮಲ್ಲಿ ಯಾರಾದರೂ ಒಬ್ಬರ ಊರಿಗೆ ಮಾತ್ರ ಬರಲು ಸಾಧ್ಯವಾದೀತು!'' ಎಂದು ನುಡಿದರು. ಆಗ ಪ್ರತಿಯೊಬ್ಬ ಶಿಷ್ಯನೂ ನಮ್ಮಲ್ಲಿಗೆ ಬನ್ನಿ ! ನಮ್ಮಲ್ಲಿಗೇ ಬನ್ನಿ !' ಎಂದು ವಾದಿಸತೊಡಗಿದರು. ಆಗ ಗುರುಗಳು, “ನೀವಾರೂ ಬಡಿದಾಡಬೇಡಿರಿ ! ನಾವು ನಿಮ್ಮೆಲ್ಲರ ಮನೆಗೂ ತಪ್ಪದೇ ಬರುವೆವು! ಎಂದು ನುಡಿದರು.ಶಿಷ್ಯರು ಅವರ ಇಂಥ ಹೇಳಿಕೆಯ ಬಗ್ಗೆ ಸಂಶಯ ತಾಳ ತೊಡಗಿದರು. ಆಗ ಗುರುಗಳು ಒಬ್ಬೊಬ್ಬರನ್ನಾಗಿ, ತಮ್ಮ ಪೂಜಾ ಗೃಹದೊಳಗೆ ಕರಿಸಿಕೊಂಡು ನಾನು ಈ ಸಲದ ದೀಪಾವಳಿಗೆ ನಿಮ್ಮ ಊರಿಗೇ ಬರುವೆ ಈ ಸಂಗತಿಯನ್ನು ಯಾರೆದುರೂ ತಿಳಿಸಕೂಡದು !” ಎಂದು ಹೇಳಿ ಹೇಳಿ ಎಲ್ಲ ಶಿಷ್ಯರನ್ನೂ ಅವರವರ ಊರಿಗೆ ಕಳಿಸಿಕೊಟ್ಟರು. ನಂತರ ಗಾಣಗಾಪುರದ ಭಕ್ತರು ಬಂದು ಗುರುಗಳೇ ! ತಾವು ದೀಪಾವಳಿಯ ಹಬ್ಬಕ್ಕೆ ಇಲ್ಲಿಯೇ ಉಳಿದು, ನಮ್ಮೆಲ್ಲರ ಸೇವೆ ಸ್ವೀಕರಿಸಬೇಕು ! ಪರಸ್ಥಳಗಳಿಗೆ ಹೋಗಲು ನಿಮ್ಮನ್ನು ನಾವು ಬಿಡಲ...

Ramaa samudrana kumari lyrics in Kannada

Image
ರಾಮಾ ಸಮುದ್ರಾನ ಕುಮಾರಿ ನಿನ್ನ ಸರಿ ಸಮಾನಯಾರಮ್ಮ ಉಮೇಶ ಮೊದಲಾದ ಮಾರಾನಿಯಾಕರವು ನಮಿಸಿ ನಿಮ್ಮ ಪಾದ ಕಮಲಾ ಭಜೀ ಪೊಲೆ || ಕರುಣಾವಾರುಧಿಯೆಂದು ಶರಣಜನರು ನಿನ್ನ ಸ್ಮರಣೆಯ ಮಾಡುವರೇ । ಹರಿಗಾಕ್ಷಿ ಕೇಳೆನ್ನ ಕರುಣದಿಂದಲೆ ಈಗ ಹರಣವ ಮಾಡಿನಿಮ್ಮ ಚರಣವ ತೋರಿಸೆ ।।೧।। ।।ರಮಾ।। ಅಪಾರಮಹಿಮನ ವ್ಯಾಪಾರಂಗಳ ತಿಳಿದು ಕಾಪಾಡುವೆ ಜಗವ । ಕೋಪಾರಹಿತಳಾಗಿ ಶ್ರೀಪತಿಯೊಳು ಎನ್ನ ತಾಪತ್ರಯವ ಹೇಳಿ ಪೋಷಿಸಬೇಕಮ್ಮ ।।೨।। ।।ರಮಾ।। ವಾಸವಂದಿತ ಸಿರಿ ಶೇಷವಿಠಲ ಗುರು ವಾಸವ ಮಾಡುವರೆ । ಘಾಸಿ ಮಾಡದೆ ಈಗ ಈ ಸಮಯದೊಳಗೆ ವಾಸುದೇವಗೆ ಪೇಳಿ ಪೋಷಿಸಬೇಕಮ್ಮ ।।೩।। ।।ರಮಾ।।

Sankshipta Guru Charitre in kannada

Image
ಸರಸ್ವತಿ ಗಂಗಾಧರ ಗುರುಭಕ್ತನಿಗೊಲಿದು ಬಂದನಾ ಶ್ರೀದತ್ತ  ಪರಿಪರಿತಾಪವ ಕೇಶವ ಕಳೆಯುತ ನಿಜಸುಖವಿತ್ತನು ಶ್ರೀದತ್ತ ಕಷ್ಟದಿಂದ ಕಂಗೆಡುವ ಬಾಲಕನ ಕಂಡ ಸಿದ್ಧಮುನಿ ಶ್ರೀದತ್ತ  ದುಷ್ಟ ಭಾವನೆಯ ಬಿಟ್ಟು ಭಜಿಸಿದರೆ ಕೊಟ್ಟು ಕಾಯುವನು ಶ್ರೀದತ್ತ ನಿಂತು ನುಡಿವ ಯೋಗೀಂದ್ರನಂಘ್ರಯನು ಪಿಡಿದು ಕೇಳಿದ ಶ್ರೀದತ್ತ ಇಂತು ಕರುಣೆಯದು ಕೊನೆಗೆ ಬಂದಿತೇ ಪಾಲಿಸು ಪಾಲಿಸು ಶ್ರೀದತ್ತ  ಆಲಿಸು ಕುವರನೆ ಶ್ರೀಗುರುಚರಿತೆಯ ಭವತಾರಕನವ ಶ್ರೀದತ್ತ  ತೇಲುವ ಎಲ್ಲವ ಹಸಿವನು ಹಿಂಗಿಸಿ ಹರುಷದಿ ಕಾಯುವ ಶ್ರೀದತ್ತ ಇವನೇ ದತ್ತನು ಅನಸೂಯಾತ್ಮಜ ವಿಶ್ವನಿಯಾಮಕ ಶ್ರೀದತ್ತ   ಭವತಿಯ ನೆವದಲಿ ವಿಪ್ರನ ಮಡದಿಗೆ ಸುತನಾದನು ತಾ ಶ್ರೀದತ್ತ ಶ್ರೀಪಾದ ಶ್ರೀವಲ್ಲಭ ನಾಮದಿ ಕುಲ ಉದ್ಧರಿಸಿದ ಶ್ರೀದತ್ತ  ಕಾಪಿಡೆ ನಡೆದನು ಭಾರತ ಜನವನು ಯಾತ್ರೆಯ ನೆವದಿಂ ಶ್ರೀದತ್ತ  ತೀರ್ಥಕ್ಷೇತ್ರಗಳ ಸುತ್ತಿ ಪತಿತರನು ಪಾವನಗೊಳಿಸಿದ ಶ್ರೀದತ್ತ ಸಾರ್ಥಕವಾದ ಗೋಕರ್ಣವ ನೋಡುತ ಕುರವದಿ ನಿಂತನು ಶ್ರೀದತ್ತ ಮಂದಮತಿ ಅಂಬಾಕುಮಾರನಿಗೆ ಜ್ಞಾನದಾತನು ಶ್ರೀದತ್ತ  ಮಂದವಾಸರದ ಪ್ರದೋಷ ಪೂಜೆಯ ಮಹಿಮೆಯ ಹೇಳಿದ ಶ್ರೀದತ್ತ ಅಗಸಗ ಮುಂದಣ ಜನುಮದಿ ರಾಜ್ಯದ ಭೋಗವನಿತ್ತನು ಶ್ರೀದತ್ತ ಅಗಲದಂತಿರಲು ವಲ್ಲಭೇಶನ ಸಂಕಟ ಕಳೆದನು ಶ್ರೀದತ್ತ ವಚನದಂತೆ ಅಂಬಾ ಮಾಧವರಿಗೆ ಬಾಲಕನಾದನು ಶ್ರೀದತ್ತ ಉಚಿತಸಮಯ ಬರೆ ನಾಲ್ಕೂ ವೇದದ ಸಾರವ ಹೇಳಿದ ಶ್ರೀದತ್ತ ಅವಳೀತನಯರ ತಾಯಿಗೆ...

Shri Guru Charitre - Chapter 46

Image
    ಅಧ್ಯಾಯ ೪೬ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕಾ ! ಹಿಪ್ಪರಿಗೆಯಲ್ಲಿದ್ದ ಗುರು ಭಕ್ತರು ಒಂದು ಸಲ ಗುರುಗಳಿಗೆ ವಿನಂತಿಸಿಕೊಂಡು, ಅವರನ್ನು ತಮ್ಮ ಊರಿಗೆ ಪಾದಪೂಜೆಗಾಗಿ ಕರೆದೊಯ್ದರು. ಅಲ್ಲಿ ಗುರು ಪೂಜೆಯು ಒಳ್ಳೇ ವಿಜೃಂಭಣೆಯಿಂದ ನಡೆಯುವದಿತ್ತು ಆ ಊರಲ್ಲಿ ನರಕೇಸರಿ ಎಂಬ ಹೆಸರಿನ ಪ್ರಸಿದ್ಧ ಕವಿಯಿದ್ದನು. ಆತನು ಆ ಗ್ರಾಮದ ಕಲ್ಲೇಶ್ವರನ ಪರಮ ಭಕ್ತನಾಗಿದ್ದನು, ಕಲ್ಲೇಶ್ವರನ ಮೇಲೆ ಬಹಳಷ್ಟು ಪದ್ಯಗಳನ್ನು ರಚಿಸಿ ಆತನು ಕೀರ್ತಿ ಪಡೆದಿದ್ದನು. ಹೀಗಿರಲು ಆ ಗ್ರಾಮದ ಭಕ್ತರು ನರಕೇಸರಿಯ ಬಳಿಗೆ ಹೋಗಿ, “ಇಂದು ನಮ್ಮ ಗುರುಗಳ ಪೂಜೆ ಇಟ್ಟು ಕೊಂಡಿದ್ದೇವೆ. ಅವರಿಗೆ ಸಂಗೀತದ ಮೇಲೆ ಬಹಳ ಪ್ರೀತಿ ! ಅದಕ್ಕಾಗಿ ನೀವು ಕೆಲವೊಂದು ಸ್ತುತಿಪರವಾದ ಪದ್ಯಗಳನ್ನು ಬರೆದು ಕೊಡಬೇಕು!” ಎಂದು ವಿನಂತಿಸಿಕೊಂಡರು. ಆದರೆ ನರಕೇಸರಿಯು ನಾನು ಕಲ್ಲಿನಾಥನಿಗೆ ನನ್ನ ನಾಲಿಗೆಯನ್ನು ಅರ್ಪಣ ಮಾಡಿಬಿಟ್ಟಿದ್ದೇನೆ. ಅಂದಮೇಲೆ, ಬೇರೇ ದೇವತೆಗಳನ್ನಾಗಲಿ, ನರರನ್ನಾಗಲೀ ಸ್ತುತಿಸಿ ಬರೆಯುವದು ನನ್ನಿಂದಾಗದು!' ಎಂದು ನಿಷ್ಠುರವಾಗಿ ಹೇಳಿಸಿಬಿಟ್ಟನು. ಈ ಸಮಾಚಾರವು ಗುರುಗಳಿಗೆ ಗೊತ್ತಾಯಿತು. ಅಂದು ಪೂಜೆಗೆಂದು ಕಲ್ಲೇಶ್ವರನ ಗುಡಿಗೆ ಹೋದಾಗ ನರಕೇಸರಿಗೆ ಒಮ್ಮಿಂದೊಮ್ಮೆಲೇ ನಿದ್ರೆ ಆವರಿಸಿತು. ನಿದ್ರೆಯಲ್ಲಿ ಆತನಿಗೆ ಗುರುಗಳು ಕಲ್ಲೇಶ್ವರನ ಮೇಲೆ ಕುಳಿತಿರುವಂತೆಯೂ ತಾನು ಅವರ ಪೂಜೆ ಮಾಡುತ್ತಿರುವಂತೆಯೂ ಸ್ವಪ್ನ ಕಂಡನು. ಸ್ವಪ್ನದಲ್ಲಿ ಗುರುಗ...

Pujisuve Sitarama na lyrics in Kannada

Image
ಪೂಜಿಸುವೆ ಸೀತಾರಾಮರನ ಆನಂದದಿಂದಲ್ಲಿ ಭರತ ಲಕ್ಷ್ಮಣರನ್ನು ನಮ್ಮದಿದೂ ಸ್ವಾಮಿ ನಮಗೆ ಬಲು ಪ್ರೇಮಿ ಸ್ಮರಿಸಿರಿ ಸ್ವಾಮಿ ಸರ್ವಾಂತರ್ಯಾಮಿ  ಭಕ್ತರ ಕಾಪಾಡು ಕೃಷ್ಣಸ್ವಾಮಿ  ನಿನ್ನ ಭಜನೆಯ ಮಾಡುವೆ ರಾಮಸ್ವಾಮಿ  ವಾಲಿಯನ್ನೆ ಕೊಂದು ಸುಗ್ರೀವನನ್ನೆ ತಂದು ಸುಖವಾಗಿ ಸ್ನೇಹವನ್ನೆ ಬೆಳಸಿ ಬಂದು ಭಕ್ತ ಹನುಮಂತನ ಭಜನೆಯಿಂದ ಭವ ಬಂಧನವ ಬಿಡಿಸಿದನು ರಾಮಚಂದ್ರ ಸೇತುವೆಯ ಕಟ್ಟಿ ಶರಧಿಯನ್ನೆ ದಾಟಿ ವಿಭೀಷಣ ದೇವರಿಗೆ ಪಟ್ಟ ಕಟ್ಟಿ  ದುಷ್ಟ ರಾವಣನು ಕೊಂದ ಜಟ್ಟಿ ನೀನು  ಶಶಿ ಮುಖಿ ಸೀತೆಯನ್ನೆ ತಂದು ಬಿಟ್ಟೆ 

Shri Guru Charitre - Chapter 45

Image
  ಅಧ್ಯಾಯ ೪೫ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕಾ ! 'ನಂದಿ' ಎಂಬ ಹೆಸರಿನ ಒಬ್ಬ ಬ್ರಾಹ್ಮಣನಿಗೆ ಮೈ ತುಂಬಾ ಬಿಳುಪು ರೋಗ ಆವರಿಸಿತ್ತು. ಆತನು ತುಳಜಾಪುರದ ಅಂಬಾಭವಾನಿಯನ್ನು ಮೂರು ವರ್ಷಗಳ ಕಾಲ ಆರಾಧಿಸಿದನು. ಆತನಿಗೆ ಜಗದಂಬೆಯು ಸ್ವಪ್ನ ಮುಖಾಂತರವಾಗಿ, “ಚಂದ್ರಲಾ ಪರಮೇಶ್ವರಿಯ ಬಳಿಗೆ ಹೋಗು !'' ಎಂದು ಆಜ್ಞೆ ಮಾಡಿ ಕಳಿಸಿದಳು, ನಂತರ ಅವನು ಆರು ತಿಂಗಳವರೆಗೆ ಚಂದ್ರಲಾ ಪರಮೇಶ್ವರಿಯ ಬಳಿಯಲ್ಲಿ ತಪಸ್ಸು ಮಾಡಿದನು. “ನೀನು ಗಾಣಗಾಪರಕ್ಕೆ ಹೋಗು ! ಅಲ್ಲಿ ಜಗದ್ಗುರುವಿನ ಅವತಾರವಾಗಿದೆ. ಅಲ್ಲಿ ನಿನ್ನ ವ್ಯಾಧಿ ನಿವಾರಣೆಯಾಗುವದು !” ಎಂದು ಸ್ವಪ್ನವಾಯಿತು. ಆತನು ಎಚ್ಚತ್ತು ಕುಳಿತನು. ಮತ್ತೂ ನಿಷ್ಟುರತೆಯಿಂದ ದೇವಿಯೆದುರು ನಿಂತು, “ನಿನ್ನಿಂದ ನನ್ನ ರೋಗ ವಾಸಿ ಮಾಡುವದಾಗದಿದ್ದರೆ, ಆರು ತಿಂಗಳವರೆಗೆ ನನ್ನನ್ನು ಸುಮ್ಮನೇ ಯಾಕೆ ಕಷ್ಟಪಡಿಸಿದಿ ? ಜಗನ್ಮಾತೆಯಾದ ನಿನಗೇ ನನ್ನ ವ್ಯಾಧಿ ನಿವಾರಣೆ ಮಾಡುವದಾಗದಿದ್ದರೆ, ಮಾನವ ದೇಹ ಹೊತ್ತು ಬಂದವನು, ಅದೆಂತು ಅದನ್ನು ಪರಿಹಾರ ಮಾಡಲು ಸಾಧ್ಯ ? ನಾನು ಗಾಣಗಾಪುರಕ್ಕೆ ಹೋಗಲಾರೆ ! ನೀನೇ ನನ್ನ ವ್ಯಾಧಿ ನಿವಾರಿಸಬೇಕು; ಇಲ್ಲವೇ ಇಲ್ಲಿಯೇ ನನ್ನ ದೇಹ ಪತನವಾಗಬೇಕು !” ಎಂದು ಹಟತೊಟ್ಟವನಂತೆ ನುಡಿದು, ಮತ್ತು ಅಲ್ಲಿಯೇ ತಪಸ್ಸಿಗೆ ಕುಳಿತನು. ಆ ರಾತ್ರಿ ಪೂಜಾರಿಗಳಿಗೂ ಆ ಬ್ರಾಹ್ಮಣನನ್ನು ಗಾಣಗಾಪುರಕ್ಕೆ ಹೊತ್ತುಹಾಕಿರಿ !'' ಎಂದು ಪರಮೇಶ್ವರಿಯು ಸ್ವಪ್ನ ಮುಖಾಂ...

Aksharamala Ganapathi

Image
ಅನುಪಮ ಮಹಿಮಾ ಸಾರ ಗಣೇಶ  ಆದಿಪುಜ್ಯನುತ ದೇವ ಗಣೇಶ  ಇಷ್ಟ ಫಲಪ್ರದ ಸುಮುಖ ಗಣೇಶ  ಈಶ ತನಯ ಮಹನೀಯ ಗಣೇಶ  ಉರುಗ ವಿಭೂಷಣ ವಿಭವ ಗಣೇಶ  ಊಜೀತ ತನು ತನುಪಾತ ಗಣೇಶ  ಋಷಗಣ ವಂದಿತಾ ವರದ ಗಣೇಶ  ೠಕಾರ ಪ್ರಿಯ ಪೊರೆದ ಗಣೇಶ  ಎಡರುಗಳನ್ನು ಕಡಿದಿಡುವ ಗಣೇಶ  ಏಕದಂತ ನಿತ್ಯಾತ್ಮಕ ಗಣೇಶ  ಐಕ್ಯಮತ್ಯ ನಿಕ್ಷೇಪ ಗಣೇಶ ಒಲಿಯುತ ಭಕ್ತರ ಪೊರೆವ ಗಣೇಶ ಓಂಕಾರಾ+ ದೇವ ಗಣೇಶ  ಔಪಾಸಕರ ಅಭಿಮಾನಿ ಗಣೇಶ  ಅಂಬಾ ಪ್ರಿಯ ತನುಜಾತ ಗಣೇಶ  (ಅಃ)ಅಹವಶತೃ ವಿನಾಶ ಗಣೇಶ ಕರುಣಾಕರ ಕಮನೀಯ ಗಣೇಶ  ಖೇಚರಗಾನ ನಂದ ಗಣೇಶ  ಗಜಮುಖನಾಮದಿ ಮೆರೆವ ಗಣೇಶ  ಘಾತುಕ ದುರ್ಜನಭಂಗ ಗಣೇಶ  ಗಂಗೋದ್ಭವ ಲಿಂಗೈಕ್ಯ ಗಣೇಶ  ಚಂದ್ರ ಗರ್ವ ವಿಧ್ವಂಸ ಗಣೇಶ  ಛತ್ರಾಲಂಕೃತ ಚಲುವ ಗಣೇಶ  ಜನನ ಮರಣ ಭಯರಯಿತ ಗಣೇಶ  ಝoಕಣಿ ಗಿಂತಿಣಿಯಂತ ಗಣೇಶ  ಜ್ಞಾನಗಮ್ಯ ಸರ್ವಜ್ಞ ಗಣೇಶ  ಟoಕಪಾಶಧರ ವಿಕಟ ಗಣೇಶ  ಠಕಾರೋಪಣ ಜಠರ ಗಣೇಶ  ಡಮರುಗ ಹಸ್ತ ಸುಪುತ್ರ ಗಣೇಶ  ಢಕ್ಕಾನಾದಲೋಲ ಗಣೇಶ  ಣತಪಾರಿಪಾಲಿನಿ ನಿಪುಣ ಗಣೇಶ  ತತ್ವಜ್ಞಾನ ನಂದ ಗಣೇಶ  ಥಳ ಥಳ ಪಾಮಿಣಿ ಮುಕುಟ ಗಣೇಶ  ದ್ವೈಮಾತುರ  ವಿಘ್ನೇಶ ಗಣೇಶ  ಧುoಡು ವಿನಾಯಕ ವಿನುತ ಗಣೇಶ  ನಾಗಸೂತ್ರಧಾರ ಶಾಂತ ಗಣೇಶ  ಪರಮ ಪುರುಷನ ಅವತಾರ ಗಣೇಶ  ...

Shri Guru Charitre - Chapter 44

Image
  ಅಧ್ಯಾಯ ೪೪ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕಾ ! ಗಾಣಗಾಪುರದಲ್ಲಿ ಗುರುಗಳಲ್ಲಿ ಅತ್ಯಂತ ಭಕ್ತಿಯನ್ನಿಟ್ಟ ಒಬ್ಬ ನೇಕಾರನಿದ್ದನು. ಅವನು ದಿನಾಲೂ ಮಠದ ಅಂಗಳ ಉಡುಗಿ, ನೀರಿನಿಂದ ಛಳಿ ಹೊಡೆದು, ಗುರುಗಳಿಗೆ ನಮಸ್ಕರಿಸಿ ಹೋಗುತ್ತಿದ್ದನು. ಈ ಸೇವೆಗೆ ಬಹು ದಿವಸಗಳಿಂದಲೂ ಆತನು ಚ್ಯುತಿ ತಂದುಕೊಂಡಿರಲಿಲ್ಲ. ಆಗ ಮಹಾಶಿವರಾತ್ರಿಯು ಸಮೀಪಿಸಿತ್ತು. ಆ ನೇಕಾರನ ಮನೆಯವರೆಲ್ಲರೂ ಆ ವರ್ಷ ಶ್ರೀಶೈಲ ಯಾತ್ರೆಗೆ ಹೊರಡುವದೆಂದು ನಿರ್ಣಯಿಸಿದ್ದರು. ಈತನನ್ನೂ ಕರೆದರು, ಆದರೆ ತನಗಿರುವ ನಿತ್ಯ ಗುರುಸೇವೆಯನ್ನು ಬಿಟ್ಟು, ಶ್ರೀಶೈಲಕ್ಕೆ ಹೊರಡಲು ಆತನ ಮನಸ್ಸಾಗಲಿಲ್ಲ. ಆದ್ದರಿಂದ, ಆ ಬಂಧುಬಳಗದವರಿಗೆ ನನ್ನ ಶ್ರೀಶೈಲ ಇಲ್ಲಿಯೇ ಇದೆ ! ಗುರುಗಳೇ ನನ್ನ ಪಾಲಿನ ಮಲ್ಲಿಕಾರ್ಜುನ ! ಗುರುಮಠವೇ ಶ್ರೀಶೈಲ!! ಸಂಗಮ ಕ್ಷೇತ್ರವೇ ಪಾತಾಳಗಂಗೆ !” ಎಂದು ಹೇಳಿ ನಿರಾಕರಿಸಿಬಿಟ್ಟನು. ಬಂಧುಗಳು ಆತನನ್ನು ಮೂರ್ಖನೆಂದು ಹಳಿದು, ಯಾತ್ರೆಗೆ ಹೊರಟು ಹೋದರು. ಮುಂದೆ 8-10 ದಿನಗಳು ಕಳೆದವು. ಶಿವರಾತ್ರಿ ಬಂತು, ಅಂದು ಪ್ರಾತಃಕಾಲ ಗುರುಗಳೂ ಆ ತಂತುಕನನ್ನು ಕುರಿತು, ನಿನ್ನ ಬಂಧುಗಳೆಲ್ಲ ಶ್ರೀಶೈಲಯಾತ್ರೆಗೆ ಹೋದರು. ನೀನೇಕೆ ಹೋಗಲಿಲ್ಲ?'' ಎಂದು ಪ್ರಶ್ನೆ ಮಾಡಿದರು. ಅದಕ್ಕೆ ತಂತುಕನು, ಗುರುನಾಥಾ ! ನಿಮ್ಮ ಚರಣ ಸನ್ನಿಧಿ ಯಲ್ಲಿಯೇ ಎಲ್ಲ ತೀರ್ಥ ಕ್ಷೇತ್ರಗಳೂ ವಾಸವಾಗಿರುವಾಗ, ನಿಮ್ಮ ಮಹಿಮೆಯನ್ನರಿಯದ ಮೂರ್ಖರಂತೆ ನಾನೇಕೆ ವ್ಯರ್ಥವಾಗಿ ಶ್ರಮವಹಿಸಲಿ ?...

Jo Jo Jo Rama

Image
ಜೋ ಜೋ ಜೋ ರಾಮ ಸದ್ಗುಣಧಾಮ ಜೋ ಜೋ ಜೋ ರಾಮ  ಕೌಸಲ್ಯ ಪ್ರಿಯ ಬಾಲ ಕೌಶಿಕ ಮಖ ಪಾಲ  ವಾಸವಮಣೀ ನೀಲ ವಾರಿಜಾಖಿಲಜಾಲ ಪಂಕಜದಳನೇತ್ರ ಪಾವನ ಸುಚರಿತ್ರಾ ಶಂಕರನುತಿಪಾತ್ರ ಲಂಕಾಧಿಪಮಿತ್ರಾ ಕರುಣಾರಸಾಗರ ಶರಣಾಗತೋದ್ಧಾರಾ ವರಭದ್ರ ಮಂದಾರ ಗರಪುರಲಂಕಾರ

Shri Guru Charitre - Chapter 43

Image
    ಅಧ್ಯಾಯ ೪೩ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕಾ ! ಗುರ್ವಾಜ್ಞೆಯಂತೆ ನಿಮ್ಮ ಪೂರ್ವಜನಾದ ಸಾಯಂದೇವನು, ಕುಟುಂಬ ಸಮೇತನಾಗಿ ಬಂದು, ಗಾಣಗಾಪುರದಲ್ಲಿಯೇ ಇರತೊಡಗಿದನು. ಗುರು ಗಳು ಅವರೆಲ್ಲರನ್ನೂ ತಮ್ಮ ವರದ ಹಸ್ತದಿಂದ ಆಶೀರ್ವದಿಸಿದರು. ಸಾಯಂದೇವನ ಮಗನಾದ ನಾಗನಾಥನನ್ನು ಕೃಪಾದೃಷ್ಟಿಯಿಂದ ನೋಡಿದರು. ಅಂದು ಅನಂತ ಚತುರ್ದಶಿ ಇದ್ದ ಪ್ರಯುಕ್ತ ಸಾಯಂದೇವನು ಗುರುಗಳನ್ನೇ ಅನಂತನೆಂಬ ಭಾವನೆಯಿಂದ ತನ್ನ ಮಡದಿಯಿಂದೊಡಗೂಡಿಕೊಂಡು ಬಹು ಭಕ್ತಿಯಿಂದ ಪೂಜಿಸಿ, ಅನಂತರ ವ್ರತ ಕಥೆಗಳನ್ನು ಶ್ರವಣ ಮಾಡಿದರು. ನಾಮಧಾರಕಾ ! ಗುರುಗಳು ತ್ರಿಮೂರ್ತಿಗಳ ಪೂರ್ಣಾವತಾರರಾದ ಪ್ರಯುಕ್ತ ಯಾವ ವ್ರತ, ಪೂಜೆಗಳನ್ನು ಮಾಡಿದರೂ, ಅವು ನೇರವಾಗಿ ಗುರುಗಳಿಗೆ ಸಲ್ಲುತ್ತಿದ್ದವೆಂದು ಸಿದ್ಧಮುನಿಯು ನಾಮಧಾರಕನಿಗೆ ತಿಳಿಸಿದನೆಂಬಲ್ಲಿಗೆ ಸಾರರೂಪ ಶ್ರೀಗುರು ಚರಿತ್ರೆಯ 43ನೇ ಅಧ್ಯಾಯ ಮುಕ್ತಾಯವಾಯಿತು.

Ram Ram Ram small song

Image
ರಾಮ್ ರಾಮ್ ರಾಮ್ ಪರಮ ಸುಮಂಗಲ ರಾಮ್ ರಾಮ್ ರಾಮ್ ಜನನ ಜಾನಕಿ ಜೀವನ್ ರಾಮ್ ಜೈ ಜೈ ರಾಮ್ ಜಯರಾಮ ಜಯತು ಜಯತು ರಾಮ ಪರಮ ಸುಮಂಗಲ ರಾಮ್ ರಾಮ್ ರಾಮ್ ಬೋಲೋ ಪರಮ ಸುಮಂಗಲ ರಾಮ್ ರಾಮ್ ರಾಮ್

Alli nodalu Rama

Image
ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಎಲ್ಲೆಲ್ಲಿ ನೋಡಿದರು ಅಲ್ಲಿ ಶ್ರೀರಾಮ || ಪ || ರಾವಣನ ಮೂಲಬಲ ಕಂಡು ಕಪಿಸೇನೆ ಆವಾಗಲೆ ಬೆದರಿ ಓಡಿದವು ಈ ವೇಳೆ ನರನಾಗಿ ಇರಬಾರದೆಂದೆಣಿಸಿ ದೇವ ರಾಮಚಂದ್ರ ಜಗವೆಲ್ಲ ತಾನಾದ || ೧ || ಅವನಿಗೆ ಇವ ರಾಮ ಇವನಿಗೆ ಅವ ರಾಮ ಅವನಿಯೊಳ್ ಈಪರಿ ರೂಪವುಂಟೆ ಲವಮಾತ್ರದಿ ಅಸುರದಿ ದುರುಳರೆಲ್ಲರು ಸೇರಿ ಅವರವರೆ ಹೊಡೆದಾಡಿ ಹತರಾಗಿ ಹೋದರು || ೨ || ಹನುಮರಾದಿಯಾಗಿ  ಜನರು ತಬ್ಬಿಕೊಂಡು ಕುಣಿಕುಣಿದಾಡಿದರು ಹರುಷದಿಂದ ಕ್ಷಣದಲಿ ಪುರಂದರ ವಿಠಲರಾಯನು ಕೊನೆಗೊಡೆಯನು ತಾನೊಬ್ಬನಾಗಿ ನಿಂತ || ೩||

Shri Guru Charitre - Chapter 42

Image
    ಅಧ್ಯಾಯ ೪೨ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ಸಾಯಂದೇವನೇ ಕೇಳು ! 'ಗುರು ಸೇವೆಯನ್ನು ಮಾಡುವದು ಎಷ್ಟು ಕಠಿಣವಿದೆ' ಎಂಬ ಬಗ್ಗೆ ನಿನಗೊಂದು ಕಥೆ ಹೇಳುವೆವು. ಬ್ರಹ್ಮಾಂಶ ಸಂಭೂತವಾದ ತ್ವಷ್ಟ ಬ್ರಹ್ಮನಿಗೆ, ವಿನಯಶೀಲನೆಂಬ ಮಗನಿದ್ದನು. ಆತನು ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ್ಗೆ ಒಂದು ಮಳೆಗಾಲದಲ್ಲಿ ಗುರುಗಳ ಕುಟೀರವು ಸೋರತೊಡಗಿತು. ಆದ್ದರಿಂದ ಗುರುಗಳು ಆತನಿಗೆ ಬೇರೊಂದು ಪರ್ಣ ಕುಟಿಯನ್ನು ನಿರ್ಮಿಸಲು ತಿಳಿಸಿದರು ಅದೇ ಸಮಯದಲ್ಲಿ ಗುರುಪತ್ನಿಯೂ ತನಗೆ “ಹೊಲಿಗೆ ಇಲ್ಲದ ಕುಪ್ಪಸವನ್ನು ತಂದುಕೊಡು !'' ಎಂದು ಆಜ್ಞೆ ಮಾಡಿದಳು ಗುರುಪುತ್ರನು ತನಗೆ ನೀರ ಮೇಲೆ ನಡೆಯುವದಕ್ಕೂ ಮನಬಂದಂತೆ ಚಲಿಸುವದಕ್ಕೂ ಸಮರ್ಥವಾದ ಒಂದು ಜೊತೆ ಪಾದುಕೆಗಳು ಬೇಕೆಂದು ತಿಳಿಸಿದನು. ಗುರುಪುತ್ರಿಯು, ತನಗೆ ಬೇಕಾದಲ್ಲಿಗೆ ತೆಗೆದುಕೊಂಡು ಹೋಗಲು ಬರುವಂಥ ಒಂದು ಮನೆ ಬೇಕು !” ಎಂದು ಅದೇ ಸಮಯದಲ್ಲಿ ಹೇಳಿದಳು. ಆ ಬ್ರಹ್ಮಚಾರಿಯು ದಿಕ್ಕುಗಾಣದೇ ಗುರುನಾಮಸ್ಮರಣೆ ಮಾಡುತ್ತ ಹೊರಟನು. ಆತನಿಗೆ ಅವಧೂತನೊಬ್ಬನದರ್ಶನವಾಯಿತು ಅವಧೂತನು ಆತನಿಗೆ ಕಾಶೀಯಾತ್ರೆಯ ಮಹತ್ವ ತಿಳಿಸಿ, “ನೀನು ವಿಶ್ವನಾಥನ ದರ್ಶನ ಪಡೆದರೆ ಎಲ್ಲಾ ಸಮಸ್ಯೆಗಳು ಪರಿಹಾರವಾಗುವವು ನನ್ನೊಂದಿಗೆ ಕಾಶಿಗೆ ಬಾ !” ಎಂದು ನುಡಿದು, ಆತನನ್ನು ಮನೋವೇಗದಿಂದ ಕಾಶೀ ಕ್ಷೇತ್ರಕ್ಕೆ ಕರೆದೊಯ್ದು ವಿಶ್ವನಾಥನ ದರ್ಶನ ಮಾಡಿಸಿದನು, ವಿಶ್ವನಾಥನು ವಿನಯಶೀಲನಿಗೆ ಪ್ರತ್ಯಕ್ಷನಾಗಿ,...

Shri Guru Charitre - Chapter 41

Image
    ಅಧ್ಯಾಯ ೪೧ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕನೇ ಗುರುಗಳ ಕೀರ್ತಿಯು ನಾಡಿನ ತುಂಬೆಲ್ಲ ಹರಡಿಹೋಗಿತ್ತು. ಅದನ್ನು ಜನಮುಖದಿಂದ ತಿಳಿದ ನಿಮ್ಮ ಪೂರ್ವಜನಾದ ಸಾಯಂದೇವನು, ಗುರುಗಳಲ್ಲಿ ಭಕ್ತಿ ಹೊಂದಿ, ಅವರನ್ನು ಪುನಃ ದರ್ಶನ ಮಾಡಿಕೊಳ್ಳುವ ಲವಲವಿಕೆಯಿಂದ ಗಾಣಗಾಪುರಕ್ಕೆ ಬಂದನು, ಗಾಣಗಾಪುರವು ದೂರದಿಂದ ದೃಷ್ಟಿಗೆ ಬಿದ್ದೊಡನೆಯೇ ನಿಂತಲ್ಲಿಯೇ ಸಾಷ್ಟಾಂಗ ನಮಸ್ಕಾರ ಹಾಕಿದನು. ಮಠಕ್ಕೆ ಬಂದು ಗುರುಗಳನ್ನು ಕಂಡು ಅವರ ಚರಣ ಕಮಲಗಳ ಮೇಲೆ ಬಹುಭಕ್ತಿಯಿಂದ ಹೊರಳಾಡಿದನು. ಗುರುಗಳನ್ನು ನಾನಾಬಗೆಯಿಂದ ಸ್ತುತಿಸಿ ಜೈಜೈಕಾರ ಮಾಡಿದನು. ಗುರುಗಳು ಸಂತುಷ್ಟರಾಗಿ ಆತನ ತಲೆಯ ಮೇಲೆ ಹಸ್ತವನ್ನಿಟ್ಟು, “ಸಾಯಂದೇವಾ ! ನೀನು ನಮ್ಮ ಪರಮಭಕ್ತನು, ನಿನಗೆ ವಂಶಪರಂಪರೆಯಾಗಿಯೂ ನಮ್ಮ ಸೇವಾ ಭಾಗ್ಯ ಲಭಿಸುವದು. ನೀನು ಬೇಗ ಸಂಗಮಕ್ಕೆ ಹೋಗಿ ಸ್ನಾನ ಮಾಡಿ, ಅಶ್ವತ್ಥ ಸೇವೆಯನ್ನು ಮುಗಿಸಿಕೊಂಡು ಬಾ ! ಇಂದು ನಮ್ಮ ಪ೦ಕ್ತಿಯಲ್ಲಿಯೇ ಭೋಜನವಾಗಲಿ,'' ಎಂದು ಹೇಳಿದರು. ಸಾಯ೦ದೇವನು ಗುರುಗಳ ಆದೇಶದಂತೆ ಸ್ನಾನ ಅಶ್ವತ್ಥ ಸೇವೆಗಳನ್ನು ಮುಗಿಸಿಕೊಂಡು ಬಂದು, ಗುರುಪೂಜೆ ಮಾಡಿ, ಶ್ರೀ ಗುರುಗಳಿಗೆ ಭಿಕ್ಷೆ ಹಾಕಿದನು. ಶಿಷ್ಯರು ಸಮೇತರಾಗಿ ಗುರುಗಳು ಅಂದು ಬಹು ತೃಪ್ತಿಯಿಂದ ಊಟ ಮಾಡಿದರು. ಊಟದ ನಂತರ ಗುರುಗಳು ಸಾಯಂದೇವನಿಗೆ “ನೀನು ಎಲ್ಲಿರುವಿ ?. ನಿನ್ನ ಹೆಂಡತಿ ಮಕ್ಕಳಲ್ಲಿರುವರು ? ನಿಮ್ಮ ಕ್ಷೇಮ ಸಮಚಾರವೇನು ?'' ಎಂದು ಮುಂತಾಗಿ ಪ್ರಶ್ನೆ ...

Shri Guru Charitre - Chapter 40

Image
    ಅಧ್ಯಾಯ ೪೦ ||ಹರಿಃ ಓಂ ಶ್ರೀ ಗುರುಭ್ಯೋ ನಮಃ ||  ನಾಮಧಾರಕಾ ! ಒಂದು ದಿನ ನರಹರಿ ಎಂಬ ಹೆಸರಿನ ಯಜುರ್ವೇದೀ ಬ್ರಾಹ್ಮಣನೊಬ್ಬನು ಕುಷ್ಠ ರೋಗದಿಂದ ಪೀಡಿತನಾಗಿ, ಗುರು ಕೃಪೆಗಾಗಿ ಬಂದನು. ಆತನು ಗುರುಗಳೆದುರು ತನ್ನ ದೀನ ಸ್ಥಿತಿಯನ್ನು ಹೇಳಿಕೊಳ್ಳುತ್ತ ಸದ್ಗುರುನಾಥಾ ನಾನು ಯಜುರ್ವೇದವನ್ನು ಅಭ್ಯಾಸ ಮಾಡಿದ್ದರೂ ಸಹಿತ, ಪೂರ್ವಜನ್ಮದ ಪಾಪ ಕರ್ಮಗಳಿಂದಾಗಿ, ಈ ಹೀನ ಬೇನೆಯು ನನಗೆ ಅಂಟಿಕೊಂಡಿದೆ. ಇದರಿಂದಾಗಿ ನನಗೆ ಜನರಲ್ಲಿ ಮಯ್ಯಾದೆಯಿಲ್ಲದಂತಾಗಿದೆ, ಯಾರೂ ನನ್ನನ್ನು ಸಮೀಪಕ್ಕೆ ಬರಿಸಿಗೊಡದಾಗಿದ್ದಾರೆ. ದಯಾಳುಗಳಾದ ತಾವು ನನ್ನನ್ನು ಉದ್ಧಾರ ಮಾಡುವಿರೆಂದು ವಿಶ್ವಾಸದಿಂದ ತಮ್ಮ ದರ್ಶನಕ್ಕೆ ಬಂದಿರುವೆ.” ಎಂದು ಪ್ರಾರ್ಥಿಸಿಕೊಂಡನು. ಗುರುಗಳು ಮಠದ ಹತ್ತಿರ ಉರುವಲಕ್ಕಾಗಿ ತಂದು ಹಾಕಿದ್ದ ಕಟ್ಟಿಗೆಗಳಲ್ಲಿದ್ದ ಒಂದು ಔದುಂಬರದ ಕಟ್ಟಿಗೆಯನ್ನು ಕೈಗೆತ್ತಿಕೊಂಡು ಆ ಬ್ರಾಹ್ಮಣನಿಗೆ ಕೊಟ್ಟರು. ಆ ಕಟ್ಟಿಗೆಯನ್ನು ಸಂಗಮದ ಪೂರ್ವ ಭಾಗದಲ್ಲಿ ನೆಡಿಸಿ, ತ್ರಿಕಾಲದಲ್ಲಿಯೂ ನದೀ ಸ್ನಾನ ಮಾಡಿ, ಅದಕ್ಕೆ ಕೊಡದಿಂದ ನೀರು ಹಾಕು ! ಅದು ಎಂದು ಚಿಗುರೊಡೆದು ಮರವಾಗುವದೋ ಅಂದೇ ನಿನ್ನ ಬೇನೆ ನಿವಾರಣೆ ಆಗುವದು !” ಎಂದು ಆಜ್ಞೆ ಮಾಡಿದರು. ಗುರುಗಳ ಆಜ್ಞೆಯಂತೆ ಧೃಡ ಸಂಕಲ್ಪ ಮಾಡಿಕೊಂಡ ಆ ಬ್ರಾಹ್ಮಣನು ಅಂದೇ ಆ ಕಟ್ಟಿಗೆಯನ್ನು ಸಂಗಮದ ಪೂರ್ವದಿಕ್ಕಿನಲ್ಲಿ ಒಂದು ಮಡಿ ಮಾಡಿ ಮರದಂತೆ ಹುಗಿದ, ಸ್ನಾನ ಮಾಡಿ ಉಪವಾಸ ವ್ರತದಿಂದಲೇ ಅದಕ್ಕೆ ತ್ರಿಕಾ...