Posts

Showing posts from March, 2022

ಒಗಟು ಬಿಡಿಸಿ (ಭಾಗ ೧)

Image
 ಒಗಟು ಬಿಡಿಸಿ  ಇಲ್ಲಿ ಕೆಲವು ಒಗಟು ಇದೆ. ಅದನು ಬಿಡಿಸಲೂ ಪ್ರಯತ್ನಿಸಿ. ನಿಮ್ಮ ಉತ್ತರವನ್ನು ಕಾಮೆಂಟನಲ್ಲಿ ಬರೆಯಿರಿ.  ೧.  ಬಾಲ್ಯದಲ್ಲಿ ಹಸಿರುಸೀರೆ, ಯೌವನದಲ್ಲಿ ಕೆಂಪುಸೀರೆ, ಮುಪ್ಪಿನಲ್ಲಿ ಕರಿಸೀರೆ. ನಾನ್ಯಾರು??? ೨. ಮರದಲ್ಲಿ ಹಬ್ಬುತ್ತದೆ, ಪೇಟೆಯಲ್ಲಿ ಮೆರೆಯುತ್ತದೆ, ಶುಭಕಾರ್ಯದಲ್ಲಿ ಮುಂದಿರುತ್ತದೆ. ಯಾರದು??? ೩. ಮೂರು ಕಾಲಿನ ರಾಣಿ, ಎಲ್ಲರ ಮನೆಯಲ್ಲಿ ಇರುತಿದೆ ಜಾಣೆ, ಹೊರೆ ಕಟ್ಟಿಗೆ ತಿಂತೀಯಾ, ಗಡಿಗೆ ನೀರು ಕುಡಿಯುತ್ತಿಯಲ್ಲೆ ಮಹಾರಾಣಿ. ಯಾರು?? ೪. ಕತ್ತಲು ಮನೆಯಲ್ಲಿ ಕಂಬ ಬಿದ್ದರೆ ನಮ್ಮಪ್ಪನು ಹುಡುಕಲಾರ ನಿಮ್ಮಪನು ಹುಡುಕಲಾರ. ಯಾರದು? ೫. ಮಗುವಾಗಿ ಹುಟ್ಟಿ ಚಪ್ಪರದೊಳಗೆ ನಿಂತೆ, ಹುಡುಗಿಯಾಗಿ ಬೆಳೆದು ಕೆಂಪೂಸೀರೆ ಉಟ್ಟೆ, ನಾನಿಲ್ಲದ ಮನೆಯಿಲ್ಲ. ಹಾಗಾದರೆ ನಾನು ಯಾರು? ೬.  ಅಂಗಿ ಮೇಲೆ ಅಂಗಿ, ಹದಿನಾರು ಅಂಗಿ, ಬಿಚ್ಚಿ ನೋಡು ತಂಗಿ, ಏನು ಹೇಳು ನಿಂಗಿ? ೭.  ಮುಳ್ಳುಮ್ಮನ ಹೊಟ್ಟೆಯಲ್ಲಿ ನೂರಾರು ಮಕ್ಕಳು. ಯಾರದು?? ೮.  ಬಿಳಿ ಹುಡುಗಿ ಮೇಲೆ ಗುದ್ದಿದಾಗ ಮನೆಯಲ್ಲಿ ಮಕ್ಕಳು. ಯಾರದು? ೯. ನದಿಗಳಿವೆ ನೀರಿಲ್ಲ, ಬೆಟ್ಟಗಳಿವೆ ಕಲ್ಲುಗಳಿಲ್ಲ. ಏನದು? ೧೦. ಮೇಲೆ ಹಸಿರು, ಒಳಗೆ ಕೆಂಪು, ತಿಂದರೆ ತಂಪು. ಏನದು?

ಶ್ರೀ ಗುರು ಚರಿತ್ರೆ - ನಿತ್ಯ ಪಾರಾಯಣ

Image
ಸರಳ ಶ್ರೀ ಗುರುಚರಿತ್ರೆ Playlist - https://youtube.com/playlist?list=PLpfNci0J7maf4mH29XDzAktR3t4CeMZaH ||ಶ್ರೀ ಗುರುಭೋ ನಮಃ ಹರಿ ಓಂ॥  ||ತ್ರಿಮೂರ್ತಿ ರೂಪಿಣೇ ದತ್ತಾತ್ರೇಯಾಯ ನಮಃ|| ಭಗವಂತನು ತನ್ನನ್ನು ನಂಬಿದ ಭಕ್ತರನ್ನು ಕಾಪಾಡಲು ಹಲವಾರು ಅವತಾರಗಳನ್ನು ತಾಳಿದ್ದಾನೆ. ಪ್ರಸಿದ್ಧವಾದ ದಶಾವತಾರಗಳಷ್ಟೇ ಅಲ್ಲದೆ ವ್ಯಾಸ, ಕಪಿಲ, ದತ್ತಾತ್ರೇಯ ಮೊದಲಾದ ಜ್ಞಾನಪದ ರೂಪಗಳನ್ನು ಲೋಕ ಕಲ್ಯಾಣಕ್ಕಾಗಿ ತಾಳಿದ ಪರಮಾತ್ಮನು ಈ ಕಲಿಯುಗದಲ್ಲಿಯೂ ತನ್ನ ಮಹಿಮೆಗಳನ್ನು ತೋರಿಸಿದ್ದಾನೆ. ಅತ್ರಿ ಋಷಿಗಳ ಪತ್ನಿ ಅನಸೂಯೆಯ ಪಾತಿವ್ರತ್ಯವನ್ನೂ ಮಣಿದು ಶಿಶು ರೂಪ ತಾಳಿದರು. ತ್ರಿಮೂರ್ತಿಗಳೂ ಒಂದೇ ರೂಪದಲ್ಲಿ ದತ್ತನಾಗಿ ಜ್ಞಾನ ಬೋಧೆಯನ್ನು ಮಾಡಿದರು. ಶ್ರೀ ದತ್ತಾತ್ರೇಯನು ಮತ್ತೆ ಕಲಿಯುಗದಲ್ಲಿ ಎರಡು ಅವತಾರಗಳನ್ನು ತಾಳಿದನು. ಶ್ರೀಪಾದ ವಲ್ಲಭ ಹಾಗೂ ಶ್ರೀ ನೃಸಿಂಹ ಸರಸ್ವತೀಯತಿಗಳೇ ಆ ರೂಪಗಳಾಗಿವೆ. ಈ ತ್ರಿಮೂರ್ತಿ ಸ್ವರೂಪಿಯಾದ ಶ್ರೀ ದತ್ತಾತ್ರೇಯನ ಮೂರು ಅವತಾರಗಳ ಮಹಿಮೆಯೇ ಪರಮ ಫಲಪ್ರದವಾದ ಪಾರಾಯಣ ಗ್ರಂಥವಾದ ಶ್ರೀಗುರುಚರಿತ್ರೆಯ ಕಥಾವಸ್ತುವಾಗಿದೆ. ಗುರುಚರಿತ್ರೆಯನ್ನು ಮೊದಲು ಹಳೆಗನ್ನಡ ಪದ್ಯಗಳಲ್ಲಿ ಸಾಖರೆ ವಂಶಜರಾದ ಸರಸ್ವತೀ ಗಂಗಾಧರರೆಂಬ ದತ್ತ ಭಕ್ತರು ರಚಿಸಿದರು. ಇದನ್ನು ಅನೇಕರು ಗದ್ಯ ರೂಪದಲ್ಲಿ ಪ್ರಕಟಿಸಿದ್ದಾರೆ. ಶ್ರೀಗುರು ಚರಿತ್ರೆಯು ಅಧ್ಯಾಯಗಳ ಪಾರಾಯಣ ಗ್ರಂಥ. ಇದನ್ನು ಪ್ರತಿ ಗುರುವಾರ ಪಠಿಸಿದರೆ ಒಂದು ವರ...