Shri Guru Charitre - Chapter 49

 

ಶ್ರೀ ಗುರು ಚರಿತ್ರೆ


ಅಧ್ಯಾಯ ೪೯

||ಹರಿಃ ಓಂ ಶ್ರೀ ಗುರುಭ್ಯೋ ನಮಃ || 

ನಾಮಧಾರಕನೇ ! ಮುಂದೆ ಕೆಲವು ದಿನಗಳು ಕಳೆಯುವಷ್ಟರಲ್ಲಿಯೇ ಗುರುಗಳ ಪೂರ್ವಾಶ್ರಮದ ತಂಗಿಯಾದ ರತ್ನಾಯಿಯು ಕುಷ್ಠರೋಗ ಪೀಡಿತಳಾಗಿ ಗುರುದರ್ಶನಕ್ಕೆ ಬಂದಳು. ತನ್ನ ಮೇಲೆ ಕರುಣೆದೋರಬೇಕೆಂದು ಪರಿಪರಿಯಿಂದ ಪ್ರಾರ್ಥಿಸುತ್ತ ಅವರ ಅಡಿದಾವರೆಗಳೆದುರು ಹೊರಳಾಡತೊಡಗಿದಳು. ಗುರುಗಳು ರತ್ನಾಯಿಯನ್ನು ಕುರಿತು, “ತಂಗೀ ! ನೀನು ಬಹಳ ಪಾಪವನ್ನು ಮಾಡಿರುವಿ ! ಅದರ ಫಲವನ್ನು ನೀನು ಮುಂದಿನ ಜನ್ಮದಲ್ಲಿ ಸಹಿತ, ಕುಷ್ಠರೋಗಿಯಾಗಿಯೇ ಅನುಭವಿಸಬೇಕಾಗುವದು !” ನಾನು ಇಷ್ಟು ದಿನಗಳವರೆಗೆ ಬಳಲಿ, ನಿನ್ನ ಚರಣ ಕಮಲಗಳನ್ನು ಕಂಡಿರುವೆ; ನಿನ್ನ ಚರಣದರ್ಶನವಾದ ಮೇಲೆಯೂ ನನ್ನ ಪಾಪ ಉಳಿಯುವದೇ ?'' ಎಂದು ಪ್ರಶ್ನೆ ಮಾಡಿದಳು.

ಗುರುಗಳು ನಮ್ಮ ದರ್ಶನವಾದ ಮೇಲೆ ನಿನ್ನ ಪಾಪಗಳುಳಿಯಲಾರವೆಂಬ ನಿಶ್ಚಿತ ಭಾವನೆ ನಿನಗಿದ್ದರೆ, ಇದೇ ಜನ್ಮದಲ್ಲಿಯೇ ನೀನು ಮುಕ್ತಳಾಗುವಿ ! ನೀನು “ಪಾಪ ವಿನಾಶಿನಿ'' ತೀರ್ಥದಲ್ಲಿ ಸ್ನಾನಮಾಡು ! ನಿನ್ನ ರೋಗ ನಿವಾರಣೆಯಾಗುವದು !'' ಎಂದು ಹೇಳಿದರು. ರತ್ನಾಯಿಯು ಗುರ್ವಾಜ್ಞೆಯಂತೆ ತೀರ್ಥಸ್ನಾನ ಮಾಡಿ ರೋಗದಿಂದ ವಿಮುಕ್ತಿ ಪಡೆದಳು. ಮುಂದೆ ಅವಳು ಮಠದಲ್ಲಿಯೇ ಕೈಲಾದ ಸೇವೆ ಮಾಡುತ್ತ ಉಳಿದು ಕೊಂಡಳು. ಗುರುಗಳು ಶಿಷ್ಯರಿಗೆ ಗಾಣಗಾಪುರದ ಸ್ಥಾನ ಮಹಾತ್ಮೆಯನ್ನು ವಿವರಿಸಿ ಹೇಳಿದರು. 'ಭೀಮಾ- ಅಮರಜಾ ಸ೦ಗಮವು, ಗಂಗಾ-ಯಮುನೆಗಳ ಸಂಗಮವೆಂದೂ, ಈ ಸ್ಥಳವೇ ಶ್ರೀ ಕಾಶಿಯೆಂದೂ' ವಿವರಣೆ ನೀಡಿದರು. ನಂತರ ಅಲ್ಲಿ ಕೋಟಿತೀರ್ಥ ತೋರಿಸಿದರು. ಗುರುಗಳು ಗಾಣಗಾಪುರದಲ್ಲಿ ಉಳಿದು ಅದನ್ನು ಕೈಲಾಸವನ್ನಾಗಿ ಮಾರ್ಪಡಿಸಿದರೆಂದು, ಸಿದ್ಧಮುನಿಯು ನಾಮಧಾರಕನಿಗೆ ಹೇಳಿದನೆಂಬಲ್ಲಿಗೆ, ಸಾರರೂಪ ಶ್ರೀ ಗುರುಚರಿತ್ರೆಯ 49ನೆಯ ಅಧ್ಯಾಯ ಮುಕ್ತಾಯವಾಯಿತು.

Comments

Popular posts from this blog

Hanumane Tandeyu Hanumane Thayiyu lyrics

Sankshipta Guru Charitre in kannada

Sri Rama Chandirane