Shri Guru Charitre - Chapter 52

 

ಶ್ರೀ ಗುರು ಚರಿತ್ರೆ

ಅಧ್ಯಾಯ ೫೨

||ಹರಿಃ ಓಂ ಶ್ರೀ ಗುರುಭ್ಯೋ ನಮಃ || 

ನಾಮಧಾರಕನೇ ! ಶ್ರೀ ಗುರುಗಳು ಶ್ರೀಶೈಲಕ್ಕೆ ಹೊರಡುವಾಗ ಅಲ್ಲಿಯ ಭಕ್ತ ಜನರು, ಬಹಳೇ ಕಳವಳಕ್ಕೀಡಾಗಿದ್ದರು. ತಮ್ಮನ್ನು ಪರದೇಶಿಗಳನ್ನಾಗಿ ಮಾಡಿ ಹೋಗಬಾರದೆಂದು ಅವರು ಗುರುಗಳಿಗೆ ಪರಿಪರಿಯಿಂದ ಪ್ರಾರ್ಥಿಸಿದ್ದರು. ಗುರುಗಳು ಅವರೆಲ್ಲರಿಗೂ ಲೋಕದ ಕಣ್ಣಿಗೆ ನಾವು ಶ್ರೀಶೈಲ ಯಾತ್ರೆಗೆ ಹೋಗುತ್ತಿರುವಂತೆ ಕ೦ಡರೂ, ಈ ಗಾಣಗಾಪುರದಲ್ಲಿ ನಾವು ಶಾಶ್ವತವಾಗಿ ನೆಲೆಗೊಂಡಿರುತ್ತೇವೆಂದು ನುಡಿದು ಅವರನ್ನೆಲ್ಲ ಸಮಾಧಾನಗೊಳಿಸಿದ್ದ ವಿಷಯವನ್ನಂತೂ ನಿನಗೆ ಈ ಮೊದಲೇ ತಿಳಿಸಲಾಗಿದೆ. ಗುರುಗಳಿದ್ದಾಗ ಗಾಣಗಾಪುರವು ವೈಕುಂಠದಂತೆ ಶೋಭಿಸುತ್ತಿತ್ತು. ಈಗ ಅದು ತಾಯಿ ಇಲ್ಲದ ಮಗುವಾಗಿ, ದೇವರಿಲ್ಲದ ಗುಡಿಯಾಗಿ, ಗಂಡನಿಲ್ಲದ ನಾರಿಯಂತೆ ಕಳಾಹೀನವನಿಸುತ್ತಿತ್ತು, ಶ್ರೀಶೈಲ ತಲುಪಿದ ದಿವಸ ಗುರುಗಳು, ಪಾತಾಳ ಗಂಗೆಯಲ್ಲಿ ಸಾಗಿದರು. ನಂತರ ಅವರೂ ಅದೃಶ್ಯರಾದ ವಿಷಯವನ್ನೂ ನಿನಗೆ ಈ ಮೊದಲೇ ತಿಳಿಸಲಾಗಿದೆ. ಎಂದು ಸಿದ್ಧಮುನಿಯು ನಾಮಧಾರಕನಿಗೆ ಮುಖ್ಯ ವಿಷಯಗಳನ್ನು ಮತ್ತೊಮ್ಮೆ ನೆನಪಿಸಿದರೆಂಬಲ್ಲಿಗೆ ಸಾರರೂಪ ಶ್ರೀಗುರು ಚರಿತ್ರೆಯ 52ನೆಯ ಅಧ್ಯಾಯ ಮುಗಿಯಿತು.

Comments

Popular posts from this blog

Sankshipta Guru Charitre in kannada

Hanumane Tandeyu Hanumane Thayiyu lyrics

Ganga Jatadhara Gowri Shankara lyrics