Shri Guru Charitre - Chapter 31
ಅಧ್ಯಾಯ ೩೧
||ಹರಿಃ ಓಂ ಶ್ರೀ ಗುರುಭ್ಯೋ ನಮಃ ||
ನಾಮಧಾರಕನೇ ಸತಿಯು ಹೀಗೆ ದುಃಖಿಸುತ್ತಿರಲು ಭಸ್ಮರುದ್ರಾಕ್ಷಿಗಳಿಂದ ಅಲಂಕೃತ ಯೋಗಿಯೊಬ್ಬರು ಬಂದು, ಮಗಳೇ ! ಯಾಕೆ ಸುಮ್ಮನೇ ಅಳುತ್ತಿರುವಿ ? ವಿಧಿ ಲಿಖಿತವು ಯಾರಿಗೂ ಬಿಟ್ಟಿದ್ದಲ್ಲ. ಪ್ರಪಂಚದಲ್ಲಿ ಹುಟ್ಟಿದವರೆಲ್ಲರೂ ಒಂದಿಲ್ಲೊಂದು ದಿನ ಸಾಯತಕ್ಕವರೇ ! ಈ ಸಂಸಾರದ ಸಂಬಂಧಗಳು ಸಹಿತ ಮಾಯೆಯಿಂದ ಕೂಡಿದಂತಿವೆ. ಸಮುದ್ರ ತೇಲುವ ಕಟ್ಟಿಗೆಗಳು, ಸ್ವಲ್ಪ ಸಮಯ ಒಂದಕ್ಕೊಂದು ಕೂಡಿಕೊಂಡಿದ್ದು, ಬಿರುಗಾಳಿ ಬಿಟ್ಟೋಡನೆಯೇ ದಿಕ್ಕಿಗೊಂದೊಂದು ಹೊರಟು ಹೋಗುವದಿಲ್ಲವೇ ? ಹಾಗಿದೆ ಈ ಗಂಡ, ಹೆ೦ಡತಿ, ತಂದೆ-ತಾಯಿ-ಬಂಧು-ಬಳಗ ಎಂಬ ಸಂಬಂಧ, ಪೂರ್ವಾರ್ಜಿತ ಕರ್ಮಫಲದಿಂದ ಎಲ್ಲೆಲ್ಲಿಯೋ ಹುಟ್ಟಿದ ದೇಹಗಳಿಗೆ ಸತಿ-ಪತಿಯರೆಂಬ ಸಂಬಂಧ ಬೆಳೆದು ಬಂದಿರುತ್ತದೆ ! ಆದರೆ ದೇಹಗಳಿಗೆ ಹುಟ್ಟಿ ನೊ೦ದಿಗೇ ಮರಣವೂ ಬೆಂಬತ್ತಿ ಬಂದಿರುತ್ತದೆ. ಅಜ್ಞಾನಿಗಳಾದವರು ಮಾತ್ರ ಇಂಥಾ ನಶ್ವರವಾದ ದೇಹವು ಪತನವಾದದ್ದಕ್ಕೆ ದುಃಖಪಡುತ್ತಾರೆ. ನೀನು ತಿಳಿದವಳಿರುವಿ ! ತಿರುಗಿ ಬರಲಾರದ ಪತಿಗಾಗಿ ದುಃಖಿಸದೇ ಈ ಸ೦ಸಾರ ಬಂಧನದಿಂದ ಜೀವನ್ಮುಕ್ತಿ ಪಡೆಯುವ ಮಾರ್ಗವನ್ನು ಮೊದಲು. ಹುಡುಕಿಕೋ !” ಎಂದು ಬುದ್ಧಿವಾದ ಹೇಳತೊಡಗಿದರು. ಸತಿಗೆ ಅವರ ಉಪದೇಶವು ಮನಕ್ಕೆ ನಾಟಿದ್ದರಿಂದ ಅವಳು ಚಟ್ಟನೆ ಎದ್ದು ಆ ಯೋಗಿಗಳಿಗೆ ನಮಸ್ಕರಿಸಿದಳು "ಸ್ವಾಮಿನ್ ! ನನಗಿನ್ನು ಯಾವ ಮಾರ್ಗ ??? ಎಂದು ಅಸಹಾಯಕಳಾಗಿ ಕೇಳಿದಳು. ಅದಕ್ಕೆ ಯೋಗಿಯು, 'ಸತಿಗೆ ಪತಿಯೇ ಪರದೈವ ! ಪತಿವೃತೆಯ ದರ್ಶನದಿಂದ ಪತಿತನೂ ಪಾವನನಾಗುವನು. ಪತಿ ಸಹಿತ ಪತಿಯು ಅಪವಿತ್ರಳೆಂದೇ ತಿಳಿಯಲ್ಪಡುವಳು'' ಎಂದು ನುಡಿಯಲು, ಅವಳು ಅಸಮಾಧಾನದಿಂದ ಪತಿಯನ್ನು ನುಂಗಿ ನೀರು ಕುಡಿದ ಅಭಾಗಿನಿಗೇಕೆ ಈ ಉಪದೇಶಾ ? ಇನ್ನು ಮುಂದೆ ನಾನು ನಡೆಯಬೇಕಾದ ಸೂಕ್ತ ದಾರಿ ಯಾವುದೆಂಬುದನ್ನು ಸೂಚಿಸಿ!” ಎಂದು ಕೇಳಿಕೊಂಡಳು. ಯೋಗಿಯು ಅದಕ್ಕುತ್ತರವಾಗಿ, “ಅಮ್ಮಾ ಇಲ್ಲಿ ಎರಡು ಮಾರ್ಗಗಳಿವೆ. 1ನೆಯದು ಸಹಗಮನ ಹೋಗಿ ಸತಿ ಸಾವಿತ್ರಿ' ಎನಿಸಿಕೊಳ್ಳುವದು; 2ನೆಯದು ವಿಧವಾ ಧರ್ಮದಂತೆ ನಡೆದು ಅತ್ಮೊದ್ಧಾರ ಮಾಡಿಕೊಳ್ಳುವದು !” ಎಂದು ಹೇಳಲು, ಸತಿಯು ಸ್ವಲ್ಪ ಹೊತ್ತು ಯೋಚಿಸಿ, ಸ್ವಾಮಿ ! ವಿಧವಾ ಧರ್ಮದಂತೆ ನಡೆಯುವದು ಕಷ್ಟಕರವಾಗಿದೆ; ಆದ್ದರಿಂದ ನಾನು ಸಹಗಮನ ಹೋಗುವದನ್ನೇ ಆರಿಸಿಕೊಳ್ಳುತ್ತೇನೆ. ಮಹಾತ್ಮರಾದ ತಾವು ನನಗೆ ಸದ್ಧತಿಯಾಗುವಂತೆ ಆಶೀರ್ವದಿಸಿರಿ !” ಎಂದು ನಮಸಿ ಪ್ರಾರ್ಥಿಸಿಕೊಂಡಳು. ಆಗ ಯೋಗಿಯು ಅವಳ ಪತಿಭಕ್ತಿಗೆ ಮೆಚ್ಚಿದವರಂತೆ ನಸು ನಕ್ಕರು ! ಮತ್ತೂ ಆ ಸಾಧಿಯನ್ನು ಕುರಿತು, “ಅಮ್ಮಾ! ನೀನಿನ್ನೂ 16 ವರ್ಷದ ಚಿಕ್ಕ ಮುತ್ತೈದೆಯಾಗಿರುವಿ. ಗುರುದರ್ಶನ ಮಾಡಿಕೊಂಡು,ಅವರ ಕೃಪೆಯಿಂದ ಪತಿಯನ್ನುಳಿಸಿಕೊಳ್ಳಬೇಕೆಂಬ ಆಸೆ ಹೊತ್ತು ದೂರ lದಿಂದ ನಡೆದು ಬಂದಿರುವಿ ! ಅಂದ ಮೇಲೆ ಒಮ್ಮೆಲೇ ನಿರಾಶಳಾಗಬೇಡಾ! ನಾನೀಗ ನಿನಗೆ ಗುರು ಪ್ರಸಾದದಿಂದ ಬಂದ ಭಸ್ಮ ಹಾಗೂ ನಾಲ್ಕು ರುದ್ರಾಕ್ಷಿಗಳನ್ನು ಕೊಡುತ್ತೇನೆ. ಭಸ್ಮವನ್ನು ನಿನ್ನ ಪತಿಯ ಸರ್ವಾಂಗಗಳಿಗೆ ಲೇಪಿಸು! ರುದ್ರಾಕ್ಷಿಗಳನ್ನು ಆತನ ಕಿವಿಗೆ ಕಟ್ಟು ! ಸಹಗಮನ ಹೋಗುವ ಮೊದಲು, ಆ ಸದ್ಗುರುನಾಥನ ದರ್ಶನಾಶೀರ್ವಾದಗಳನ್ನು ಪಡೆದು, ನಂತರ ಕಾರ್ಯೋನ್ಮುಖಳಾಗು.” ಎಂದು ಹೇಳಿ ಯೋಗೀಶ್ವರರು ಅಲ್ಲಿಂದ ಹೊರಟು ಹೋದರೆಂಬಲ್ಲಿಗೆ ಸಾರರೂಪ ಶ್ರೀ ಗುರುಚರಿತ್ರೆಯ ಮುವತ್ತೊಂದನೆಯ ಅಧ್ಯಾಯ ಮುಕ್ತಾಯವಾಯಿತು.
Comments
Post a Comment